ಅಣ್ಣ ತಮ್ಮ ಯಾಜ್ಜ್ಯ ತೆಕ್ಕುಂದ್ ಯಸ್ಟ್ರಾ ಬ್ಯಾರೆ ಆಗ್ಯಾರೆ
ಎರಡು ವರ್ಷ ಹಿಂದೆ ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೋಗಿದ್ದೆ, ಹಬ್ಬ ಮೂರು ದಿನ ಇರುವಾಗ ನನಗೆ ಸಾಗರಕ್ಕೆ ಹೋಗಬೇಕಾಗಿ ಬಂತು ಅವತ್ತು ಗುರುವಾರ ಸಾಗರದ ಸಂತೆ ಸಾಲದ್ದಕ್ಕೆ ಹಬ್ಬದ ಹಿಂದಿನ ಸಂತೆ ಆದ್ದರಿಂದ ಅದನ್ನ ಹಬ್ಸಂತೆ ಎಂದು ವಿಜೃಂಬಣೆಯಿಂದ ಆಚರಿಸುತ್ತಾರೆ. ನಮ್ಮ ಹಳ್ಳಿಯ ಮುಗ್ಧಜನರು ಹಬ್ಬಗಳನ್ನ ಆಚರಿಸುವ ಮಜವೇ ಬೇರೆ ಎಷ್ಟೇ ಕಷ್ಟ ಇರಲಿ, ಬತ್ತದ ಬೆಳೆ ಇಲ್ಲದಿರಲಿ,ಅತಿವೃಷ್ಟಿ,ಅನಾವೃಷ್ಟಿ,ಭೂಕಂಪ,ಸಾಂಕ್ರಾಮಿಕರೋಗ ಏನೇ ಇರಲಿ ಹಳ್ಳಿಗರು ಹಬ್ಬ ಆಚರಿಸದೇ ಇರುವುದಿಲ್ಲ. ಯಾವ ರಿಸಿಷನ್ನೂ ಇವರ ಹಬ್ಬವನ್ನ ತಡೆಯುವುದಿಲ್ಲ. ಪೇಟೆಯವರಷ್ಟು ಖರ್ಚುಮಾಡದಿದ್ದರೂ ಅವರ ಮಟ್ಟಿಗೆ ಸಂಭ್ರಮದಿಂದಲೇ ಆಚರಿಸುತ್ತಾರೆ.ಮಜದ ಸಂಗತಿಯೆಂದರೆ ಅವರು ಹಬ್ಬಕ್ಕಿಂತ ಹಬ್ಬದ ಹಿಂದುಮುಂದಿನ ಕಾರ್ಯಕ್ರಮಗಳು, ಹಬ್ಬದ ಹಿಂದಿನ ವಾರ ಎಲ್ಲಿ ಸಂತೆ ಆದರೂ ಹೋಗಿಬರುವುದು, ಹಬ್ಬ ಆದಮೇಲೆ ವಾರಗಟ್ಟಲೇ ಕೆಲಸಕ್ಕೆ ರಜಾ ಮಾಡಿ ಸಿನಿಮಾ ನೋಡುವುದು,ತಿರುಗಾಡುವುದು ಹೀಗೆ ಜೀವನವನ್ನ ಪೂರ್ಣಪ್ರಮಾಣದಲ್ಲಿ ಅನುಭವಿಸುವವರು ಅವರೇ ಅನಿಸುತ್ತದೆ. ನನಗೆ ಎಲ್ಲಾಕ್ಕಿಂತ ಹಿಡಿಸುವುದು ಅವರ ಭಾಷೆ,ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ಯ ಭಾಷೆ ನನ್ನನ್ನ ಮೊದಲು ಸೆಳೆಯುತ್ತದೆ. ತಕ್ಕಮಟ್ಟಿಗೆ ಅದನ್ನ ಕಲಿಯುವ ಪ್ರಯತ್ನ ಕೂಡಾ ಮಾಡುತ್ತೇನೆ. ಹೀಗೆ ಸಾಗರಕ್ಕೆ ಹೊಗುವ ಬಸ್ಸು ಹತ್ತಿದೆ ಆಗಲೇ ಸುಮಾರು ನೂರುಜನ ಬಸ್ಸಿನಲ್ಲಿ ನಿಂತಿದ್ದರು ನನಗೆ ಕುಳಿತುಕೊಳ್ಳುವ ಅವಕಾಶ ಎಲ್ಲಿ ಎಂದು ತಿಳಿದು ಕಂ...