Posts

Showing posts from October, 2008

ತಮಸೋಮಾ ಜ್ಯೋತಿರ್ಗಮಯ

ರಾತ್ರಿ ಊಟ ಮಾಡುತ್ತಿದ್ದಾಗ ಈ ಬ್ಲೊಗಿನ ಮೊಳಕೆ ಒಡೆಯತೊಡಗಿತು ಸ್ವತಃ ಮಾಡಿದ ಅಡುಗೆ ಬ್ಲೊಗಿನ ಹುರುಳಾಯಿತು.ಹಸಿವು ಎನ್ನುವುದು ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಕೊಂಡೊಯ್ಯುತ್ತದೆ ನೋಡಿ,ಅಮ್ಮ ಆರೂಗ್ಯ ಸರಿ ಇಲ್ಲದೆ ಹಾಸಿಗೆ ಹಿಡಿದಾಗ ಕೂಡ ಅಡಿಗೆ ಮಾಡಿದವನಲ್ಲ ನಾನು. ಈಗ ಅಡಿಗೆ ಮನೆಯಲ್ಲಿ ಸಂಜೆ ನಮ್ಮ "ಹಾಸ್ಯಾಸ್ಪದ ಪಾಕೋತ್ಸವ".(ಗತ್ಯಂತರವಿಲ್ಲದೇ ಅಲ್ಲ) ಮನೆಇಂದ ಹೊರಬಿದ್ದರೆ ಪ್ರಪಂಚದ ಎಲ್ಲ ಪ್ರದೇಶಗಳ ಖಾದ್ಯ ಸಿಗುತ್ತದಾದರೂ ಮನೆ ಅಡುಗೆಯ ರುಚಿ ಅಲ್ಲೆಲ್ಲಿ? ನಿನ್ನೆ ಮಾಡಿದ ಬೀಟ್ರೂಟ್ ಪಲ್ಯ ದೊಡ್ಡಮ್ಮನ ಕೈಅಡುಗೆಯಷ್ಟೇ ರುಚಿಯಾಗಿಬಿಟ್ಟಿತ್ತು(by mistake!).ಸ್ವಲ್ಪ ಉಳಿದದ್ದು ದಂಡ ಆಗುತ್ತದೆ ಎಂದು ಅದನ್ನ ಖಾಲಿ ಮಾಡಿ ಮಾಡಿ ಹೀಗೆ ದಪ್ಪಾಗಿದ್ದೀಯ ಎಂದು ಅಮ್ಮನನ್ನ ರೇಗಿಸುತ್ತಿದ್ದೆ ಆದರೆ ಕಾಲಚಕ್ರ ತಿರುಗಲು ಬಹಳ ಸಮಯ ಹಿಡಿಯಲೇ ಇಲ್ಲ ಎನ್ನುವುದಕ್ಕೆ ನನ್ನ ಕೈಗಡಿಯಾರ ಬಿಗಿಯಾದದ್ದೇ ಸಾಕ್ಷಿ. ಅಬ್ಬ! ತಕ್ಕಮಟ್ಟಿಗೆ ಅಡುಗೆ ಮಾಡಲು ಕಲಿತಾಯಿತು,ಬಟ್ಟೆ ತೊಳೆಯುವುದು ಅಬ್ಯಾಸವಾಗಿದೆ,ಇನ್ನು ಮದುವೆ ಆದರೂ ಬದುಕಬಹುದು ಎಂಬ ದೈರ್ಯ ಬಂದಿದೆ. ಅಂದ ಹಾಗೇ ನಾಳೆ ದೊಡ್ಡಬ್ಬ ಹೊಸಬಾಳೆಯಲ್ಲಿ ನನ್ನ ಪಾರ ಕಾಯುವ ಹುಡುಗರಿಗೆ ಈ ವರ್ಷ ನಿರಾಸೆ ಖಂಡಿತ. ಪ್ರತಿವರ್ಷದಂತೆ ಮಧ್ಯಾಹ್ನದ ಊಟವಾದ ಕೂಡಲೆ ಗುರಿಗಾಯಿ ಒಡೆಯುವವರಿಗೆ ಅಡಿಕೆ ಕಂಬ,ಗುರಿಗಾಯಿ ಗುಂಡು,ಮೆಟ್ಟಿನ ಅಳತೆ, ಹಣಕಾಸಿನ ಲೆಕ್ಕಾಚಾರದ ವ್ಯವಸ್ತೆ ಮಾಡಿಕೊಟ್ಟು ನಮ್ಮ ಮೂ...

ಯಕ್ಷಗಾನ ಮತ್ತು ನಾನು

Image
ಅಂತೂ ಎಲ್ಲರ ನಿರೀಕ್ಷೆಯ ತಲೆಬರಹದ blog ಬರೆಯಲಿಕ್ಕೆ ಕುಳಿತಾಗಿದೆ.ಇದರ ಬಗ್ಗೆ ಎಲ್ಲಿಂದ ಪ್ರಾರಂಭಿಸಬೆಕೆಂಬ ಜಿಜ್ನಾಸೆ ಇದ್ದರೂ ಬರೆಯಲೇಬೇಕಾದದ್ದು ಬಹಳಷ್ಟಿದೆ. ಯಕ್ಷಗಾನಕ್ಕೂ ನನಗೂ ಇರುವ ನಂಟು ಹುಟ್ಟಿದಾಗಿನಿಂದ (ಯಕ್ಷಗಾನವೋ ನಾನೋ ಗೊತ್ತಿಲ್ಲ). ತಾಯಿಯ ಮನೆಯಿಂದ ಅಷ್ಟು,ಮನೆ ಅಜ್ಜನಿಂದ ಅಷ್ಟು ಎಂದು ಹಿಡಿದ ಹುಚ್ಚು ಎಲ್ಲಿಯವರೆಗೆ ಅಂದರೆ ಒಂದು ಆಟ ನೊಡಲು 2500/- ಗಳಷ್ಟು ಖರ್ಚು ಮಾಡುವಷ್ಟರ ವರೆಗೆ ಬಂದು ತಲುಪಿತ್ತು. ಖರ್ಚು ಬೆರೆಯವರು ಮಾಡುವುದರಿಂದ ನನಗೆ ಆಟ ಕಂಡಿದ್ದೇ ಲಾಭ. ಆದರೂ ನನಗೇ ಹೆಚ್ಚು ಅನಿಸುವಷ್ಟು ಹುಚ್ಚು ಹಿಡಿಸಿಕೊಂಡಿದ್ದೆ.ನನ್ನ ಬಗ್ಗೆ ಯಾವುದೇ ಚರ್ಚೆ ಪ್ರಾರಂಭವಾದರೂ ಶುರು ಆಗುವುದೇ ಆಟದ ಸುದ್ದಿಯಲ್ಲಿ ಹಾಗಂತ ನಾನು ಹಾಗೆ ಯಕ್ಷಗಾನದ ಸುದ್ದಿ ಪ್ರಾರಂಭವಾದರೆ ಮೈಮರೆಯುತ್ತಿದ್ದೆ. ಕಡೆಕಡೆಗೆ ಯಾವುದೆ ಮಂಡನೆ,ಖಂಡನೆಗೆ ಉದಾಹರಣೆಯೂ ಯಕ್ಷಗಾನದ್ದೇ ಆಗಿರುತ್ತಿತ್ತು ಪೂರಕವೆಂಬಂತೆ ಸ್ನೆಹಿತವಲಯವೂ ಸಮಾನ ಆಸಕ್ತಿಯದ್ದಾಗಿತ್ತು.ಸಮಾನ ಆಸಕ್ತಿಯವರೇ ಸ್ನೇಹಿತರಾಗುತ್ತಿದ್ದರು ಎಂದೂ ಹೇಳಬಹುದು."ಏನೋ ಮರಾಯ ನಿನ್ನ ಗಾಡಿ ಕೋಟ ಶಿವಾನಂದನ ಚಂಡೆ ಹಂಗೆ ಶಬ್ದ ಮಾಡ್ತಲೋ" ಎಂದು ಮಾತಾಡುತ್ತೇನೆ ಎನ್ನುವುದು ನನ್ನ ಮೆಲಿನ ವಿಡಂಬನೆಯ ಒಂದು ಉದಾಹರಣೆ.ಕಂಪನಿ ಕೆಲಸದ ಮೇಲೆ ಮೈಸೂರಿಗೆ ಹೊರಟು ನಿಂತರೆ ಯಾವ ಮೆಳದ ಆಟ ಎಂದು ಅಮ್ಮ ರೇಗಿಸಿ ಬೈಸಿಕೊಂಡಿದ್ದೂ ಇದೆ. ಮಾತನ್ನೇ ಆಡದ ಕಡವಿನಮನೆ ಪುಟ್ಟಜ್ಜ ಆಟದ ಸುದ್ದಿಯಾದರೆ ...

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ

Image
ಒಬ್ಬನೇ ಕುಳಿತು ಹೊತ್ತು ಹೋಗದಿದ್ದಾಗ ಬರೆದ ಸಾಲುಗಳು ಕೆಲವರ ಗಮನ ಸೆಳೆದದ್ದಂತೂ ಸತ್ಯ.ಯಾವತ್ತೂ ಭಾವನೆಗಳಿಗೆ ಬುದ್ದಿ ಕೊಡದ ಆದಷ್ಟು ನಗುತ್ತಾ, ನಗಿಸುತ್ತಾ ಇದ್ದವ ಏಕಾಏಕಿ ಈ ರೀತಿ ಬರೆದದ್ದಕ್ಕೋ ಏನೊ ಕೆಲವರ ಕಣ್ಣನ್ನೂ ತುಂಬಿಸಿದೆ,ಕೆಲವರನ್ನು ಗಾಬರಿಗಿಳಿಸಿದೆ.ನಾನು ಮೊದಲ ಬಾರಿಗೆ ದೂರದ ಊರಿನಲ್ಲಿ ಇರುವುದು ಇದಕ್ಕೆ ಕಾರಣವಾಗಿರ ಬಹುದು.ಒಟ್ಟಿನಲ್ಲಿ ಹೀಗೆ ನನ್ನನ್ನು ನಾನು ಬರೆಯಲು ತೊಡಗಿಸಿ ಕೊಂಡಿರುವುದು ನನಗಂತೂ ಸಮಾಧಾನ ತಂದು ಕೊಟ್ಟಿದೆ.ಓದಿದವರೆಲ್ಲರೂ ಉತ್ತೇಜನಾತ್ಮಕ ಅಭಿಪ್ರಾಯ ಗಳನ್ನ ತಿಳಿಸಿರುವುದು ಮತ್ತೊಂದು ಬರವಣಿಗೆಗೆ ಸ್ಪೂರ್ತಿಯಾಗಿದೆ.ಆದರೆ ಬರೆವುವ ವಿಷಯ ಗಂಭೀರವಲ್ಲದ,ನಗಿಸದಿದ್ದರೂ,ಬೆಸರ ತರುವಂತದ್ದಾಗಿರದಂತೆ ಎಚ್ಚರ ವಹಿಸಬೆಕಾಗಿದೆ.ಅದಕ್ಕಾಗಿಯೇ Title ಬದಲಾಯಿಸಿದ್ದೇನೆ. ವಾರಕ್ಕೊಂದಾದರೂ Blog post ಮಾಡುವ ತೀರ್ಮಾನ ಕೈಗೊಂಡಿದ್ದೇನೆ.ಯಾವುದೇ ಕೈಗೊಂಡ ಕೆಲಸವನ್ನು ಪೂರ್ಣ ಮುಗಿಸಿದ ದಾಖಲೆ ನನ್ನದ್ದಿಲ್ಲ. ಈ ವಾಲ್ಮೀಕಿ ಅವತಾರ ಎಷ್ಟು ದಿನ ನಡೆದೀತು ನೊಡಬೆಕಾಗಿದೆ.ಯಾವುದೇ ಸಾಹಿತ್ಯ ಸ್ಪರ್ದೆಗೆ ಹೋಗುವ ಯೋಚನೆ ಸದ್ಯಕ್ಕಿಲ್ಲವಾದ್ದರಿಂದ ಈ ಬಾಲ ಭಾಷೆಯನ್ನ "ಓದುಗದೊರೆ"(ಕ್ರುಪೆ-ರವಿ ಬೆಳಗೆರೆ)ಸಹಿಸಿ ಕೊಳ್ಲಬೇಕಾಗಿದೆ.ನನ್ನ ಸಮಾದಾನಕ್ಕಾಗಿ ಬರೆದಿರುವುದರಿಂದ ನಾನೊಬ್ಬನೇ ಓದುಗನಾದರೂ ಬರೆದದ್ದಕ್ಕೆ ಸಾರ್ತಕತೆ ಇದೆ.ಬರೆಯುವಲ್ಲಿನ ನನ್ನ ಮೂರ್ಖತನಕ್ಕೆ ನಕ್ಕರೂ,ನಗಿಸುವ ಯೋಗ್ಯತೆ ನನ್ನ ಶಬ್ದ ಗಳಿಗಿದ್ದ...

ಎನಿತು ಬಲವಿರಲು ಇನ್ನೆನಿತು ಸಂಪದವಿರಲು…………………………

ಎನಿತು ಬಲವಿರಲು ಇನ್ನೆನಿತು ಸಂಪದವಿರಲು………………………… ಅಂತು ಇಂತು ಅಣ್ಣನ ಸಹಾಯದಿಂದ ದೂರದ ಮರಳುಗಾಡಿನ ಮದ್ಯ ಕತಾರ್ ಎಂಬ ದೇಶದಲ್ಲಿ ಕೆಲಸ ಸಿಕ್ಕಿದೆ. ಹಣಕ್ಕೆ ಕೊರತೆ ಇಲ್ಲ, ಕರ್ಚಿಗೆ ದಾರಿ ಇಲ್ಲವಾದ್ದರಿಂದ ಸ್ವಲ್ಪ ಮಟ್ಟಿಗಿನ ಉಳಿತಾಯ ಆದರೂ ಆಗಿ ಬಿಡಬಹುದು. ಕಳೆದ ಏಳು ವರ್ಷದ ಅನುಭವ ಜೀವನದಲ್ಲಿ ಎಲ್ಲವನ್ನೂ ಕಲಿಸಿದೆ.ಜೊತೆಯಲ್ಲಿ ಮಾಡುವ ಕೆಲಸಕ್ಕೂ ಒಂದು ಶಿಸ್ತನ್ನು ತಂದು ಕೊಟ್ಟಿದೆ.ಆಫೀಸಿನಲ್ಲಿ ಎಲ್ಲರ ಗಿಂತ ಸ್ವಲ್ಪ ಚುರುಕಾಗಿ ಕೆಲಸ ಮಾಡುವುದರಿಂದ ಸರಿಯಾದ ಸಮಯಕ್ಕೆ ಮನೆಗೆ ಹೋಗಬಹುದು. ಮನೆಯಲ್ಲಿ ಅಡುಗೆ ಮಾಡುವ ಕೆಲಸವೂ ಇಲ್ಲ ಅದನ್ನೂ ರೂಮ್ ಮೇಟ್ ಗಳು ಮಾಡುತ್ತಾರೆ.ಇನ್ನು ಅಣ್ಣ,ಅತ್ತಿಗೆ ಪ್ರತಿದಿನ ಬಂದು ಯೋಗಕ್ಶೇಮ ವಿಚಾರಿಸಿ ಕೊಂಡು ಹೋಗುತ್ತಾರಾದ್ದರಿಂದ ಹೇಳಿಕೊಳ್ಳುವಂತಹಾ ಸಮಸ್ಯೆಗಳೇನೂ ಇಲ್ಲ. ಬಂದ ಎರಡೇ ವಾರದಲ್ಲಿ ಪುಟ್ಟ ಕತಾರಿನ ಎಲ್ಲ ಮೂಲೆಗಳೂ ಹಳತಾದವು.ದೆವರ ದಯದಿಂದ ಅಣ್ಣ,ಆತ್ತಿಗೆಯರೂ ನನ್ನಂತೆಯೇ ಶ್ವಾನರೇಖೆ ಯವರಾದ್ದರಿಂದ ತಿರುಗಾಟಕ್ಕೆ ತೊಂದರೆ ಇಲ್ಲ. ಈಗ ನಿಜವಾದ ಸಮಸ್ಯೆ ಎಂದರೆ ಹೊತ್ತುಕಳೆಯುದು ತಂದ ಎಲ್ಲ ಯಕ್ಶಗಾನ ಸಿ ಡಿ ಗಳೂ ಹಳತಾದವು.ಭವಿಷ್ಯ ದ ಬಗ್ಗೆ ಯೋಚಿಸಿ ಯೋಚಿಸಿ ಬೇಸರ ಬಂತು.ಹಿಂದಿನ ಕಷ್ಟಗಳ ಯೋಚನೆ ಮಾಡೋಣವೇ, ನಿಂದೆಂತ್ತದ್ದು ಮಹಾ ಕಷ್ಟ ನನ್ನ ಕಷ್ಟದ ಮುಂದೆ ಎನ್ನುತ್ತೀರಿ.ಅನುಬವಿಸಿದ ಅಲ್ಪ ಸಂತೋಷದ ಬಗ್ಗೆ ಯೋಚಿಸಿದರೆ ಕಣ್ಣು ಮಂಜಾಗುತ್ತದೆ.ಬೆಂಗಳೂರಿನಲ್ಲಿದ್ದಾಗ ಯಾವುದು ಇ...