Posts

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಒಂದು ವಾರದಲ್ಲಿ ರಜೆಯ ಮೇಲೆ ಊರಿಗೆ ಹೋಗುವ ಕಾರ್ಯಕ್ರಮ ಇರುವುದರಿಂದ ಬೇಗ ಆಫೀಸಿಗೆ ಹೋಗುವ ಸಲುವಾಗಿ ಬೆಳಿಗ್ಗೆ 4-30 ಕ್ಕೆ ಎದ್ದು ಇವತ್ತಿನ ಮೈಲ್ಸನ್ನೆಲ್ಲಾ draft ಮಾಡಿಡುತ್ತಿದ್ದೆ ಅಷ್ಟರಲ್ಲಿ ಥೈಲೆಂಡಿನಲ್ಲಿರುವ ಮಾವನ ಮಗ ಪ್ರದೀಪ ಒಂದು forwarded mail ಕಳಿಸಿದ ಓದುತ್ತಾ ಹೋದಂತೆ ಭಯಂಕರ ಮಜ ಬಂತು (ಈ ಕಾಲಘಟ್ಟ ದಲ್ಲಿ ನಿನಗೆ ಈ ಮೈಲ್ ಹಿಡಿಸಿದ್ಯಾಕೆ ಅಂತ ಕೇಳಬೇಡಿ). ಇದು ಕೃತಿಚೌರ್ಯ ಖಂಡಿತಾ ಅಲ್ಲ ಚಂದವಾದದ್ದನ್ನ ಬ್ಲೋಗ್ ಮಿತ್ರರೊಡನೆ ಹಂಚಿಕೊಳ್ಳುವ ಸಲುವಾಗಿ ನನಗೆ ಮೈಲ್ ಕಳಿಸಿದ ಪ್ರದೀಪನ ಅನುಮತಿ ಪಡೆದು forwarded mail ನಿಂದ copy paste ಮಾಡಿದ್ದು, ಇದರ ಮೂಲ ಬರಹಗಾರ ಯಾವುದಾದರೂ ಬ್ಲೋಗ್ ನಲ್ಲಿ, ಮಾದ್ಯಮದಲ್ಲಿ ಹಾಕಿ ನೀವು ಓದಿದ್ದರೆ ಸಮಯಹಾಳು ಮಾಡೀದ್ದಕ್ಕೆ ನನ್ನನ್ನ ಬೈಯಬೇಡಿ. ಮೂಲ ಬರಹಗಾರರದ್ದೇನಾದರೂ ತಕರಾರಿದ್ದರೆ ದಯವಿಟ್ಟು ತಿಳಿಸಿ ಇಲ್ಲಿಂದ ಅಳಿಸಲಾಗುತ್ತದೆ. ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ . ಸಂಕಷ್ಟದ ಕಾಲ ಅಂತಲೂ ಹೇಳಬಹುದು . ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ . ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ . ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ . ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ . ಒಟ್ಟಾರೆ ಹೇಳಬೇಕೆಂದರೆ ’ ಟೈಮ್ ಬಂದಿದೆ ’. ಹ್ಮ್ .. ಹೌದು ...

ಹುಟ್ಟುಹಬ್ಬದ ಶುಭಾಷಯ

ನನ್ನ ಮೊದಲ ಬ್ಲೋಗ್ ಓದಿ "ನಾನೂ ಖತಾರ್ನಲ್ಲಿ ನಾಲ್ಕು ವರ್ಷ ಇದ್ದೆ"ಎಂದು ತಮ್ಮನ್ನು ಪರಿಚಯಿಸಿಕೊಂಡ ಪ್ರಕಾಶ ಹೆಗಡೆ ಎಂಬ ಅಪರಿಚಿತ ಕೇವಲ ಒಂದು ವರ್ಷದಲ್ಲಿ ನನ್ನ ಎಲ್ಲ ಕೆಲಸಗಳಲ್ಲಿ ಬೆನ್ನು ತಟ್ಟುವ ಅಣ್ಣನಾದ, ಹಿತವಾದ ಹಾಸ್ಯದಿಂದ ಕಾಲೆಳೆಯುವ ಸ್ನೇಹಿತನಾದ, ಬಾವನೆಗಳಿಗೆ ಸ್ಪಂದಿಸುವ ಆತ್ಮೀಯನಾದ, ಹಾಗು ನನ್ನ ಹಲವಾರು ಬರಹಗಳಿಗೆ ಸ್ಪೂರ್ತಿಯಾದ. ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆದ ಪ್ರಕಾಶಣ್ಣ ಒಬ್ಬ ಉತ್ತಮ ಚಾಯಾಗ್ರಾಹಕ, ಬರಹಗಾರ ಹೀಗೆ ಹಲಾವಾರು ಪ್ರವೃತ್ತಿ ಗಳನ್ನ ಮೈಗೋಡಿಸಿಕೊಂಡ ಒಬ್ಬ ನನಗಿಂತ ಹಿರಿಯ ಸ್ನೇಹಿತನ್ನ ಪಡೆದ ಬಗ್ಗೆ ನನಗೆ ನಿಜವಾದ ಹೆಮ್ಮೆ ಇದೆ. ಇವತ್ತು ಪ್ರಕಾಶಣ್ಣನ 19 ನೆಯ ಹ್ಯಾಪಿ ಬರ್ಥಡೇ. ಬ್ಲಾಗ್ ನಲ್ಲಿ ಮೊದಲ ಪರಿಚಯವಾದ ಪ್ರಕಾಶಣ್ಣನಿಗೆ ಬ್ಲಾಗ್ ನ ಮೂಲಕವೇ ಹುಟ್ಟುಹಬ್ಬದ ಶುಭಾಷಯಗಳನ್ನ ತಿಳಿಸುವ ಯೋಚನೆ ಮಾಡಿದ್ದೇನೆ. ಕುಟುಂಬದೊಟ್ಟಿಗೆ ಸುಖ ಸಂತೋಷದಿಂದ ನೂರುಕಾಲ ಬಾಳಿ ಸಾವಿರಾರು ಉತ್ತಮ ಬ್ಲಾಗುಗಳನ್ನು ಬರೆಯುವಂತಾಗಲಿ ಎಂದು ಎಲ್ಲ ಬ್ಲಾಗ್ ಮಿತ್ರರ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಜ ನ್ಮ ದಿ ನ ದ ಶು ಭಾ ಷ ಯ ಗ ಳು ಪ್ರ ಕಾ ಶ ಣ್ಣ.

ಎಸ್ ಎಮ್ ಎಸ್ ಮಾಡಿದ ಅವಾಂತರ

ಇದು ಹರೀಶ್ ಆಡೂರರ ಈ ಕನಸು.ಕಾಮ್ ನಲ್ಲಿ ಪ್ರಕಟವಾದ ನನ್ನ ಮೊದಲ ಬರಹ ಅದನ್ನ ಇಲ್ಲಿ ಮತ್ತೆ ಪ್ರಕಟಿಸಿದ್ದೇನೆ. "Hay I am Sreekanth, am doing ma 5th sem of BE in Malnad eng clg Hasan, may I know about you? can we be friends?" ಸರಿಸುಮಾರು 5 ವರ್ಷಗಳ ಕೆಳಗೆ ಒಂದು sms ಬಂತು ಮೊಬೈಲ್ ಎಸ್ ಎಮ್ ಎಸ್ ಗಳ ಉಛ್ರಾಯ ಸ್ತಿತಿಯ ಕಾಲ ಆಗ SMS ಗಳಿಂದ ಹುಡುಗಿಯರಿಗೆ ಕಾಳು ಹಾಕುವವರು,ತಮ್ಮ ಬ್ಯುಸಿನೆಸ್ ನೆಟ್ ವರ್ಕ್ ಬೆಳೆಸುವವರು,ಸ್ನೇಹಿತರು,ನಮ್ಮಂತಹ ತರ್ಲೆಗಳು ದಿನದ ಹಲವಾರು ಘಂಟೆ ಗಳನ್ನ ತಮ್ಮ ಹೆಬ್ಬೆರಳು ಊದಿಸಿಕೊಳ್ಲಲು ಶ್ರಮಿಸುತ್ತಿದ್ದರು. ಯಾರೋ ಕಳಿಸಿದ ಫಾರ್ವರ್ಡೆಡ್ ಮೆಸೆಜನ್ನ ನಮ್ಮವರಿಗೆ ಕಳಿಸಿ ಸ್ಕೋಪ್ ತೆಗೆದು ಕೊಳ್ಳುತ್ತಿದ್ದೆವು ಆದರೆ ನನಗೆ ಮೆಸೆಜಿಂಗ್ ಎಂದರೆ ಸ್ವಲ್ಪ ಅಲರ್ಜಿ ಇತ್ತು ಬಿಲ್ ಕಂಪನಿ ಕಟ್ಟುತ್ತಿದ್ದದ್ದರಿಂದ ಕಾಲ್ ಮಾಡಿ ಬಿಡುತ್ತಿದ್ದೆ.ಇಂತಹ ನೂರಾರು ಮೆಸೆಜುಗಳನ್ನ ನೋಡದೆಯೇ ಅಳಿಸಿ ಹಾಕುತ್ತಿದ್ದೆ. ಅವತ್ತು ರಾತ್ರಿ ಮಲಗಿ ನಿದ್ರೆ ಬಾರದೆ ಉರುಳುತ್ತಿದ್ದಾಗ ಮೆಸೆಜ್ ಕಳಿಸಿದ ಶ್ರೀಕಾಂತ ನನಗೆ ಹಣೆಯಲ್ಲಿ ಉದ್ದ ನಾಮ,ಕುತ್ತಿಗೆಯಲ್ಲಿ ಕಾಕಡಾ ಹೂವಿನ ಹಾರ ಹಾಕಿಸಿಕೊಂಡು ಕತ್ತಿ ಹಿಡಿದ ಕರಿ ದಡಿಯನ ಪಕ್ಕ ನಿಂತ ಬಖರಾ ನಂತೆ ಕಂಡ. ಅವನ್ನನ್ನ ಸ್ವಲ್ಪ ಆಟ ಆಡಿಸುವ ಆಲೋಚನೆ ಮಾಡಿದೆ. "hey Am Sruti E&C engineer working for Honeywell nice talking to y...

ಮತ್ತೆ ಬಂದೆ ತಮಾಷೆ ಮಾಡಲು.

ಸುಮಾರು ಎರಡು ತಿಂಗಳುಗಳಿಂದ ಬ್ಲಾಗ್ ಲೋಕದಕಡೆ ಬರಲೇ ಆಗುತ್ತಿರಲಿಲ್ಲ. ಅಫೀಸಿನಲ್ಲಿ ಸ್ವಲ್ಪ ಕೆಲಸದ ಒತ್ತಡ,ಮದುವೆಯ ತಯಾರಿ, ಮದ್ಯದಲ್ಲಿ ಒಂದುವಾರದ ಬೆಂಗಳೂರು ಪ್ರವಾಸ, ಹೀಗೆ ಹಲವಾರು ಕಾರಣಗಳಿಂದ ಮನಸ್ಸು ಹೇಳಿದಲ್ಲಿ ನಿಲ್ಲುತ್ತಿರಲಿಲ್ಲ, ಬೇಡವೆಂದಲ್ಲಿ ಹೋಗದೆ ಇರುತ್ತಿರಲಿಲ್ಲ. ವರ್ತಮಾನದ ಉದಾಹರಣೆ ಕೊಡುವುದಾದರೆ Task manager ಕೂಡ not responding ಆದಂತಾಗಿತ್ತು. ಹೊಸ ಬ್ಲಾಗ್ ಬರೆಯುವುದು ಹಾಗಿರಲಿ ಅಪ್ಡೇಟ್ ಆದ ಬ್ಲಾಗ್ಗಳನ್ನ ಓದಿ ಪ್ರತಿಕ್ರಿಯಿಸಲೂ ಆಗದ ಸ್ತಿತಿಯಲ್ಲಿದ್ದೆ. ಈತನ್ಮದ್ಯೆ ನಮ್ಮ ಇಟ್ಟಿಗೆ ಸಿಮೆಂಟು ಪ್ರಕಾಶಣ್ಣ ಹಾಗು ಛಾಯಾ ಕನ್ನಡಿ ಶಿವು ಸರ್ ರ ಪುಸ್ತಕ ಬಿಡುಗಡೆ ಕೂಡಾ ಆಯಿತು ಅವರಿಗೆ ಅಭಿನಂದನೆ ಹೇಳುವ ಸೌಜನ್ಯಕ್ಕೂ ಕೊರತೆ ಯಾಗಿ ಬಿಟ್ಟಿತ್ತು. ಅದರ ಜೊತೆ ಯಕ್ಷಗಾನದಲ್ಲಿ ನಾನು ಅರಾಧಿಸುವ ಮೇರು ಕಲಾವಿದ ಕೆರೆಮನೆ ಮಹಾಬಲ ಹೆಗಡೆ ಯವರು ದಿವಂಗತರಾದರು ಅವರಿಗೆ ಎರಡು ಸಾಲಿನ ಶ್ರದ್ದಾಂಜಲಿ ಬರೆಯಲೂ ಆಗದ ಸ್ತಿತಿಯಾಗಿ ಬಿಟ್ಟಿತ್ತು. ಸುಮಾರು ಒಂದು ವರ್ಷದಿಂದ ಬ್ಲಾಗಿಗರ ಸಮುದ್ರದ ಒಂದು ಹನಿಯಾಗಿ, ಬರವಣಿಗೆಯ ಲೋಕದಲ್ಲಿ ನನ್ನದೇ ಸಣ್ಣ ಬಳಗವನ್ನ ಸೃಷ್ಟಿಸಿ ಕೊಂಡಿದ್ದೆ ಆದರೆ ಒಮ್ಮೊಮ್ಮೆ ಯೋಚಿಸಿದರೆ ಇದೆಲ್ಲದರಿಂದ ದೂರವಾಗಿಬಿಡುವ ಆತಂಕ ಕಾಡತೊಡಗಿತ್ತು. ಎರಡು ತಿಂಗಳುಗಳಿಂದ ಜೀವನದಲ್ಲಾದ ಬದಲಾವಣೆಗಳು (ಅನ್ನುವುದಕ್ಕಿಂತ ಬೆಳವಣಿಗೆಗಳು ಎನ್ನುವುದೇ ಸರಿಯಾಗಬಹುದು.) ಇದಕ್ಕೆಲ್ಲಾ ಕಾರಣ ಇರಬಹುದು. ಆದರೆ ಕೆಲವು...

Farmville Application in Facebook

ಬೇಡದ ಕೆಲಸಕ್ಕೆ ಸಮಯ ಹೇಗಾದರೂ ಸಿಗುತ್ತದಂತೆ, ಸಿಕ್ಕಸಮಯ ಹೇಗಂದರೆ ಹಾಗೆ ಕಳೆಯುವಾಗಿನ ಸುಖ ಮತ್ತೆಲ್ಲೂ ಸಿಗದಂತೆ. ಗಾಳಿ ನೀರು ಅಹಾರ ನಿದ್ರೆ ಮುಂತಾದ ಮೂಲಭೂತ ಸೌಕರ್ಯ ಗಳಿದ್ದರೆ ಎಲ್ಲಿ ಬೇಕಾದರೂ ಬದುಕಬಹುದಂತೆ, ಇವತ್ತಿನ ಜ಼ಾಮಾನದಲ್ಲಿ ಲ್ಯಾಪ್ ಟಾಪು ಹಾಗೂ ಇಂಟರ್ ನೆಟ್ ಗಳೂ ಸೋ ಕಾಲ್ಡ್ ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಸೇರಿಕೊಂಡಿದೆಯಂತೆ. ಮೈಲ್ ಅಂತೆ,ಚಾಟ್ ಅಂತೆ ಬ್ಲಾಗ್ ಅಂತೆ,ಟ್ಯೂಬ್ ಅಂತೆ, ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಸಾವಿರಾರು ಹೊತ್ತುಕಳೆಯುವ ದಾರಿಯಂತೆ. ಸುಮಾರು 3 ವರ್ಷಗಳಿಂದ ನನಗೂ ಹಿಡಿದ ಈ ಇಂಟರ್ ನೆಟ್ ಎಂಬ ಗೀಳು ಇವತ್ತು ಇಂಟರ್ನೆಟ್ ಇಲ್ಲದಾ ಬಾಳು, ಪ್ರಾಣಿಗಳಿಗಿಂತಾ ಕೀಳು ಎನ್ನುವಷ್ಟು ನನ್ನನ್ನ ಆಕ್ರಮಿಸಿದೆ. ಆರ್ಕೂಟ್, ಫೇಸ್ ಬುಕ್,ಬ್ಲಾಗ್ ಸ್ಪಾಟ್ ಗಳಿಂದ ನೂರಾರು ಹಳೆಯ ಸ್ನೇಹಿತರನ್ನ ಪ್ರತಿದಿನ ಸಂಪರ್ಕದಲ್ಲಿಟ್ಟುಕೊಳ್ಳುವಂತೆ ಮಾಡಿದೆ, ಸಾವಿರಾರು ಹೊಸ ಸ್ನೇಹಿತರನ್ನ ಕೊಟ್ಟಿದೆ. ಅನಾನುಕೂಲತೆಗಳನ್ನು ಹೊರತು ಪಡಿಸಿ ಹೇಳುವುದಾದರೆ ಪ್ರಪಂಚವನ್ನ ಬಹಳ ಸಣ್ಣದಾಗಿಸಿದೆ. voip caal, mail,chat,online banking and online share trading ಹೀಗೆ ಹಲವಾರು ಪ್ರಯೋಜನ ಗಳನ್ನ ಪಡೆದುಕೊಂಡ, ಹಾಗೆಯೇ ಬೇಡದ (ಕೆಲವರಿಗೆ) gaming,timepassing,ಮುಂತಾದವಕ್ಕೂ ಬಳಕೆಯಾಗುವ ಇಂಟರ್ ನೆಟ್ ನನಗಂತೂ ಬಿಡಲಾಗದ ಬಂಧು ವಾಗಿದೆ. ಉದ್ದ ಪೀಟಿಕೆಯ ನಂತರ ಸಂಕ್ಷಿಪ್ತ ವಾಗಿ ವಿಷಯ ಹೇಳುವುದಾದರೆ, ಮೊದಮೊದಲು mail,chat,ork...

ಹುಚ್ಚು ಕೋಡಿ ಮನಸು 2

Image
ಕಳೆದ ಭಾನುವಾರದಿಂದ ಮೂರುದಿವಸ ರಮಧಾನ್ ರಜೆ ಇರುತ್ತದೆ ಎಂದು ತಿಳಿದಾಗ ಪಟ್ಟ ಸಂಭ್ರಮ ಹೇಳಿ ತೀರುವುದಲ್ಲ. ಮೂರೂ ದಿನಗಳನ್ನೂ ಕ್ಷಣವೂ ಹಾಳಾಗದಂತೆ ಅನುವಿಸಬೇಕು ಎನ್ನುವ ಉದ್ದೇಶದಿಂದ ನಾಲ್ಕು ದಿನಗಳ ಮೊದಲೇ ಪ್ಲಾನ್ ಮಾಡಿ ಆಗಿತ್ತು. ಮೊದಲ ದಿನ ಮುಸೈದ್ ಎನ್ನುವ ಸಮುದ್ರ ತೀರಕ್ಕೆ ಹೋಗುವ ನಿರ್ಧಾರವಾಗಿತ್ತು ಅದರಂತೆ ನಾನು, ಶಾಮ ಕಾರ್ತೀಕ ಹಾಗು ಕಾಕಾ (ನಮ್ಮ ಹಿರಿಯ ಸ್ನೇಹಿತರು) ಮದ್ಯಾನ್ಹ ಎರಡು ಗಂಟೆಗೆ ಹೊರಟು ನಲವತ್ತು ಕಿಲೋಮೀಟರ್ ದೂರದ ಬೀಚ್ ನಲ್ಲಿ ಒಂದುತಾಸು ಸತ್ತಾಡಿ ನಂತರ ಡೆಸರ್ಟ್ ಬೈಕ್ ಓಡಿಸುವಲ್ಲಿಗೆ ಬಂದೆವು ಹಬ್ಬದ ರಜೆ ಇದ್ದಿದ್ದರಿಂದ ಅಲ್ಲಿ ಜನಸಾಗರವೇ ನೆರೆದಿತ್ತು ಇದ್ದಿದ್ದರಲ್ಲೇ ಒಳ್ಳೆಯ ಎರಡು ಬೈಕ್ ಗಳನ್ನು ಬಾಡಿಗೆಗೆ ಪಡೆದು ಮರಳ ಗುಡ್ಡದ ಕಡೆ ಹೊರಟಾಯಿತು. ನಾಲ್ಕು ಜನರೂ ಡೆಸರ್ಟ್ ಬೈಕನ್ನ ಸುಮಾರು ಎರಡು ತಾಸುಗಳ ವರೆಗೆ ಎನ್ನುವುದಕ್ಕಿಂತ ಕತ್ತಲಾಗುವವರೆಗೆ ಓಡಿಸಿ ಖುಶಿ ಪಟ್ಟಿದ್ದಾಯಿತು. ಅದರ ಒಂದು ಸಣ್ಣ ವೀಡಿಯೋ ತುಣುಕನ್ನ ಹಾಗು ಕೆಲವು ಫೋಟೊಗಳನ್ನ ಇಲ್ಲಿ ಹಾಕಿದ್ದೇನೆ. ದೊಡ್ಡ ಮರಳ ಗುಡ್ಡದ ತುತ್ತ ತುದಿಯಲ್ಲಿದ್ದೇವೆ ಅಪ್ಪಿ ತಪ್ಪಿ ಒಂದಡಿ ಮುಂದೆ ಹೋಗಿದ್ದಿದ್ದರೆ ಮರಳಲ್ಲಿ ಬೈಕ್ ಸಮೇತ ಹುಗಿದು ನಮ್ಮನ್ನ ಹುಡುಕಲು ನಮಗೇ ಆಗುತ್ತಿರಲಿಲ್ಲ. ಬ್ರೇಕ್ ಮೇಲೆ ಇಟ್ಟ ಕಾಲು ಸಡಿಲವಾದರೆ ಕೈಲಾಸ ಸೇರಬೇಕು ಅಂತಹಾ ಸಂದರ್ಭದಲ್ಲಿ ಆಪ್ತಮಿತ್ರ ದ ವಿಷ್ಣು,ದ್ವಾರಕೀಶ ರ ಹಾಡು "ಗಾಳಿಯನ್ನು ತಡೆಯೋರು ಯಾರೂ ಇಲ್ಲ...

ಅಣ್ಣ ತಮ್ಮ ಯಾಜ್ಜ್ಯ ತೆಕ್ಕುಂದ್ ಯಸ್ಟ್ರಾ ಬ್ಯಾರೆ ಆಗ್ಯಾರೆ

ಎರಡು ವರ್ಷ ಹಿಂದೆ ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೋಗಿದ್ದೆ, ಹಬ್ಬ ಮೂರು ದಿನ ಇರುವಾಗ ನನಗೆ ಸಾಗರಕ್ಕೆ ಹೋಗಬೇಕಾಗಿ ಬಂತು ಅವತ್ತು ಗುರುವಾರ ಸಾಗರದ ಸಂತೆ ಸಾಲದ್ದಕ್ಕೆ ಹಬ್ಬದ ಹಿಂದಿನ ಸಂತೆ ಆದ್ದರಿಂದ ಅದನ್ನ ಹಬ್ಸಂತೆ ಎಂದು ವಿಜೃಂಬಣೆಯಿಂದ ಆಚರಿಸುತ್ತಾರೆ. ನಮ್ಮ ಹಳ್ಳಿಯ ಮುಗ್ಧಜನರು ಹಬ್ಬಗಳನ್ನ ಆಚರಿಸುವ ಮಜವೇ ಬೇರೆ ಎಷ್ಟೇ ಕಷ್ಟ ಇರಲಿ, ಬತ್ತದ ಬೆಳೆ ಇಲ್ಲದಿರಲಿ,ಅತಿವೃಷ್ಟಿ,ಅನಾವೃಷ್ಟಿ,ಭೂಕಂಪ,ಸಾಂಕ್ರಾಮಿಕರೋಗ ಏನೇ ಇರಲಿ ಹಳ್ಳಿಗರು ಹಬ್ಬ ಆಚರಿಸದೇ ಇರುವುದಿಲ್ಲ. ಯಾವ ರಿಸಿಷನ್ನೂ ಇವರ ಹಬ್ಬವನ್ನ ತಡೆಯುವುದಿಲ್ಲ. ಪೇಟೆಯವರಷ್ಟು ಖರ್ಚುಮಾಡದಿದ್ದರೂ ಅವರ ಮಟ್ಟಿಗೆ ಸಂಭ್ರಮದಿಂದಲೇ ಆಚರಿಸುತ್ತಾರೆ.ಮಜದ ಸಂಗತಿಯೆಂದರೆ ಅವರು ಹಬ್ಬಕ್ಕಿಂತ ಹಬ್ಬದ ಹಿಂದುಮುಂದಿನ ಕಾರ್ಯಕ್ರಮಗಳು, ಹಬ್ಬದ ಹಿಂದಿನ ವಾರ ಎಲ್ಲಿ ಸಂತೆ ಆದರೂ ಹೋಗಿಬರುವುದು, ಹಬ್ಬ ಆದಮೇಲೆ ವಾರಗಟ್ಟಲೇ ಕೆಲಸಕ್ಕೆ ರಜಾ ಮಾಡಿ ಸಿನಿಮಾ ನೋಡುವುದು,ತಿರುಗಾಡುವುದು ಹೀಗೆ ಜೀವನವನ್ನ ಪೂರ್ಣಪ್ರಮಾಣದಲ್ಲಿ ಅನುಭವಿಸುವವರು ಅವರೇ ಅನಿಸುತ್ತದೆ. ನನಗೆ ಎಲ್ಲಾಕ್ಕಿಂತ ಹಿಡಿಸುವುದು ಅವರ ಭಾಷೆ,ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ಯ ಭಾಷೆ ನನ್ನನ್ನ ಮೊದಲು ಸೆಳೆಯುತ್ತದೆ. ತಕ್ಕಮಟ್ಟಿಗೆ ಅದನ್ನ ಕಲಿಯುವ ಪ್ರಯತ್ನ ಕೂಡಾ ಮಾಡುತ್ತೇನೆ. ಹೀಗೆ ಸಾಗರಕ್ಕೆ ಹೊಗುವ ಬಸ್ಸು ಹತ್ತಿದೆ ಆಗಲೇ ಸುಮಾರು ನೂರುಜನ ಬಸ್ಸಿನಲ್ಲಿ ನಿಂತಿದ್ದರು ನನಗೆ ಕುಳಿತುಕೊಳ್ಳುವ ಅವಕಾಶ ಎಲ್ಲಿ ಎಂದು ತಿಳಿದು ಕಂ...