Posts

"ಅವ ದವಾಕಾನಿಗ್ ಹೋಗೂ ರಾಸ್ತಾದಾಗಾ ಸರಿ ಹೋದನ್ರೀ"

ಚಿತ್ರಕ್ಕರ ನಂ ಕನ್ನಡ ಬಾಸೆ -೨ ಬ್ಲೊಗ್ ಓದುತ್ತಾ ಇದ್ದಾಗ ನನಗೂ ಹಲವಾರು ತಮಾಷೆಯ ಪ್ರಸಂಗಗಳು ನೆನಪಾದವು ಚಿತ್ರಕ್ಕರಿಗೆ ಪರಿಕಲ್ಪನೆಯನ್ನ ಕದ್ದ ಅಪವಾದ ಹೊರಿಸಬೇಡಿ ಎಂದು ವಿನಂತಿಸಿ ಕಾಮೆಂಟ್ ಹಾಕಿ ನನ್ನ ಬೆರಳುಗಳ ಲಟಿಗೆ ತೆಗೆದು ಸಿದ್ದನಾದೆ. ಕನ್ನಡ ಒಂದೇ ಭಾಷೆಯಲ್ಲಿ ಪ್ರಾಂತ್ಯಗಳಿಗನುಗುಣವಾಗಿ ಬೇರೆ ಬೇರೆ ಅರ್ಥ ಕೊಡುತ್ತದೆ ಇಂತಹಾ ಹಲವಾರು ನಗೆ ಸನ್ನಿವೇಷಗಳು ನನ್ನ ನಿತ್ಯದ ಜೀವನದಲ್ಲಿ ನಡೆಯುತ್ತವೆ ಕೆಲವನ್ನ ಇಲ್ಲಿ ಬರೆಯುತ್ತಿದ್ದೇನೆ. ಸುಮಾರು ಹತ್ತು ವರ್ಷಗಳ ಹಿಂದೆ ನನ್ನ ಅಣ್ಣನ ಟ್ರಾನ್ಸ್ ಪೊರ್ಟ್ ವ್ಯವಹಾರವನ್ನ ನೋಡಿಕೊಳ್ಳಲೆಂದು ನಾನು ಗುಲ್ಬರ್ಗಾದಲ್ಲಿದ್ದೆ. ಅಲ್ಲಿ ಒಂದು ಫ್ಯಾಕ್ಟರಿಯಲ್ಲಿನ ಸರಕನ್ನ ಸಾಗಿಸುವ ಗುತ್ತಿಗೆ ಅಣ್ಣನದಾಗಿತ್ತು. ಮ್ಯಾನೆಜರ್ ಗಳು ಹಾಗು ಹೆಚ್ಚಿನ ಕೆಲಸಗಾರರು ಬೆಂಗಳೂರು ಹಾಗು ಮಡಕೇರಿಯವರಾಗಿದ್ದರಿಂದ ನನಗೂ ಪ್ಯಾಕ್ಟರಿಯಲ್ಲಿ ಕ್ವಾರ್ಟರ್ಸ್ ಹಾಗು ಮೆಸ್ ನ ಅನುಕೂಲ ಒದಗಿಸಿ ಕೊಟ್ಟಿದ್ದರು. ಅಲ್ಲಿ ನಮ್ಮ ಡ್ರೈವರ್ ಗಳು ಹಾಗು ಫ್ಯಾಕ್ಟರಿಯ ದಿನಗೂಲಿ ಕೆಲಸವರು ಸ್ಥಳೀಯರೆ ಇರುತ್ತಿದ್ದರು ಅವರ ಭಾಷೆಯನ್ನ ಬೆಂಗಳೂರಿನ ಹುಡುಗರು ಆಡಿಕೊಳ್ಳುತ್ತಿದ್ದರು.ಅವರು ಮಾತನಾಡುವ ಕನ್ನಡದಲ್ಲಿ ಮರಾಠಿ ತೆಲುಗು ಹಾಗು ಹಿಂದಿ ಶಬ್ಧಗಳ ಬಳಕೆ ಹೇರಳವಾಗಿತ್ತು ಮತ್ತೆ ಅರ್ಥ ಆದರೆ ಕೇಳಲು ಮಜವಾಗಿರುತ್ತಿತ್ತು. "ರಾಸ್ತಾಬಿ ಬಕ್ಕಳ್ ಕರಾಬ್ ಅದಾರೀ ಬ್ರೇಕ್ ಬೀ ಕಮ್ಜೋರ್ ಅದಾರೀ ಹಳ್ಳಗ್ ಹೋಬೆಕಾತದ್ರೀ"...

ಹೇಳೂಕಾತ್ತಿಲ್ಲೆ ಅನುಭವಿಸೂಕ್ ತೀರೂದಿಲ್ಲೆ

ಮದ್ಯಾಹ್ನ ಆಫೀಸಿನಿಂದ ಹೊರಟೆ ಕಾರ್ ಸ್ಟಾರ್ಟ್ ಮಾಡುವಷ್ಟರಲ್ಲಿ ನಮ್ಮ ಅಫೀಸ್ ಬಿಲ್ಡಿಂಗ್ ನ ಸೆಕ್ಯೂರಿಟಿ ಮುಕುಂದ ಓಡುತ್ತಾ ನನ್ನ ಕಾರಿನ ಹತ್ತಿರ ಬಂದ. "ಒಡಿಯ್ನೆ ಕಾರ್ನಿಷ್ ಕಡೆ ಹ್ವಾಪ್ದಾದ್ರೆ ನನ್ನ ಅಲ್ಲಿ ಬಿಡೂಕಾತ್ತಾ" ಕೇಳಿದ ಸರಿ ಬಾ ಅಂದೆ.ನಾನು ಡ್ರೋಪ್ ಕೊಡದಿದ್ದರೆ ಆ ಉರಿಬಿಸಿಲಿನಲ್ಲಿ ಸುಮಾರು ಆರು ಕಿಲೋಮೀಟರ್ ಅವ ನಡೆಯುವವನಿದ್ದ ಪಾಪ ನಾನು ಹೋಗುವುದು ಬೇರೆ ಕಡೆಯಾದರೂ ಅವನನ್ನ ಬಿಟ್ಟು ಹೋಗುವ ನಿರ್ದಾರ ಮಾಡಿದೆ. ಉಡುಪಿ ಕಡೆಯ ಮುಗ್ದ ಹುಡುಗನಿಗೆ ನನ್ನ ಕಂಡರೆ ಸ್ವಲ್ಪ ಸಲುಗೆ.ತನ್ನ ಬಿಡುವಿನ ವೇಳೆಯಲ್ಲಿ ನಮ್ಮ ಆಫೀಸನ್ನೂ ಸ್ವಚ್ಚ ಮಾಡಿ ಸ್ವಲ್ಪ ಮಟ್ಟಿಗೆ ಮೇಲ್ಕರ್ಚಿನ ವ್ಯವಸ್ಥೆ ಮಾಡಿಸಿಕೊಟ್ಟಿದ್ದೆ. ಅಷ್ಟೇ ನಿಯತ್ತಿನ ಹುಡುಗ ಕಷ್ಟವಾನಿ ಆದ್ದರಿಂದ ನಾನೂ ಅವನನ್ನ ನಂಬಿ ಸಣ್ಣ ಪುಟ್ಟ ಕೆಲಸ ಮಡಿಸಿಕೊಳ್ಳುತ್ತಿದ್ದೆ,ಎರಡು ದಿನಕ್ಕೊಮ್ಮೆ ನನ್ನ ಕಾರು ತೊಳೆದು ಕೊಡುತ್ತಿದ್ದ. ಸ್ವಲ್ಪ ತಲೆತಿನ್ನುವ ಸ್ವಭಾವ ಇದ್ದಿದ್ದರಿಂದ ನಾ ಅವನಿಂದ ತಪ್ಪಿಸಿಕೊಂಡು ತಿರುಗಾಡುವುದೇ ಹೆಚ್ಚು.ಕಾರಲ್ಲಿ ಕುಳಿತವನಿಗೆ ಆದಷ್ಟು ಮಾತನಾಡಲು ಅವಕಾಶ ಕೊಡದೇ ಯಕ್ಶಗಾನದ ಸಿಡಿ ಹಾಕಿದ್ದರೂ ಪುಣ್ಯಾತ್ಮ "ಓಹೋ ಭಾಗ್ವಂತ್ರು ಗಣಪತಿ ಭಟ್ರಲ್ದೇ" ಅಂದ.ಹೌದು ನಿನಗೂ ಯಕ್ಷಗಾನದ ಆಸಕ್ತಿ ಇದೆಯೇ ಅಂದೆ. "ಹೌದೆ ನಾ ಊರಾಗಿಪ್ಪಾಗ ಆಟ ಕಾಂತಿದ್ನೆ ಇಲ್ಲಿ ಎಂತ ಮಾಡುದು ಹೇಳಿ ಯಂತಾಮಾಡೂಕಾತ್ತಿಲ್ಲೆ,ದುಡ್ಡು ಒಂದು ಸಿಕ್ಕುತ್ತು ಅಂ...

ಧರ್ಮ ಜಿಜ್ನಾಸೆ.

ನಾನಿರುವ ದೇಶದಲ್ಲಿ ಈಗ ರಮದಾನ್ ಪ್ರಾರಂಭವಾಗಿದೆ ಹಗಲು ಹೊತ್ತಿನಲ್ಲಿ ಆಹಾರಸೇವನೆ ನಿಶಿದ್ದ ಆದರಿಂದ ಆಫೀಸಿನ ಸಮಯದಲ್ಲೂ ಬದಲಾವಣೆಯಾಗಿದೆ.ಅವರು ಉಪವಾಸ ಮಾಡುವುದಲ್ಲದೇ ನಮ್ಮನ್ನೂ ಆ ಪುಣ್ಯದಲ್ಲಿ ಭಾಗಿಗಳಾಗಿ ಮಾಡಲು ಹೊರಡುತ್ತಾರೆ.ನಮ್ಮ ಧರ್ಮದ ಎಷ್ಟೋ ಆಚರಣೆಗಳನ್ನೇ ಕೈಬಿಟ್ಟು ನಾಸ್ತಿಕರಾಗುತ್ತಿರುವ ನಮಗೆ ಆ ಧರ್ಮದ ಆಚರಣೆ ಉಪವಾಸ ಮಾಡಿಸೀತೆ? ಏನೇ ಇರಲಿ ಮದ್ಯಾನ್ಹ 3 ಘಂಟೆಗೆಲ್ಲಾ ಮನೆಸೇರಿ ಬಿಡುತ್ತೇನೆ.ಹೊಟ್ಟೆಗೊಂದಿಷ್ಟು ವ್ಯವಸ್ತೆ ಮಾಡಿಕೊಂಡು ಮಲಗಿದರೆ ಸಂಜೆಯಾದರೂ ಆದೀತು ಮರುದಿನ ಬೆಳಿಗ್ಗೆಯಾದರೂ ಆದೀತು.ಬ್ರಹ್ಮಚಾರಿಗಳ ನಡುವೆ ಬದುಕುವ ನನ್ನಂತ ಬ್ರಹ್ಮಚಾರಿಗೆ ಬದುಕಲು ಒಂದಿಷ್ಟು ಆಹಾರ ಅಫೀಸಿನಲ್ಲಿ ತಲೆಗೊಂದಿಷ್ಟು ಕೆಲಸ ಸಿಕ್ಕಿದರೆ ಸಾಕು.ಮನೆಗೆ ಬಂದರೆ ಹೆಚ್ಚು ಸಮಯ ನಿದ್ರಾವಸ್ಥೆಯಲ್ಲಿಯೇ ಕಳೆದು ಹೋಗುತ್ತದೆ. ಸಂಜೆ ಹೊರಗೆ ಸುತ್ತಾಡೋಣ ವೆಂದರೆ ತಾಪಮಾನ 52ಡಿಗ್ರಿ,ತೇವಾಂಶ 90% ಹೀಗೆಲ್ಲಾ ಇದ್ದು ರೂಮಿನಲ್ಲಿ ಕುಳಿತು ಚಾಟಿಗೆ ಯಾರೂ ಸಿಗದಿದ್ದಾಗ ನಿದ್ದೆಯ ಮೊರೆ ಹೋಗುವುದು ರೂಡಿ. ಹೀಗೆ ದಿಲೀಪನ ಜೊತೆ ಚಾಟ್ ಮಡುತ್ತಿದ್ದಂತೆ ಒಂದು ಧರ್ಮಜಿಜ್ನಾಸೆ ತಲೆ ಕೊರೆಯಲು ಶುರುವಾಯಿತು. ನಮ್ಮ ಧರ್ಮದಲ್ಲಿ ಇರುವಂತೆ ಗ್ರಹಗತಿ,ಜಾತಕ,ಪಂಚಾಂಗ ಅನ್ಯಮತೀಯರಲ್ಲೂ ಇರಬಹುದೇ? ಅಥವಾ ನಮ್ಮ ಹುಟ್ಟಿದ ತಾರೀಕು,ಸಮಯ ನೋಡಿ ಜಾತಕ ಬರೆಯುವಂತೆ ಅವರದ್ದೂ ಬರೆಯಬಹುದೇ? ಬರೆದರೆ ಅದು ಸರಿ ಇರಬಹುದೇ ಎಂಬಿತ್ಯಾದಿ ಗಳು ತಲೆಯಲ್ಲಿ ಕೊರೆಯುತ್ತಿವೆ. ಒಂದೇ...

ಗಿರಿಬಟ್ಟ ಗೋಡಂಬಿ ಗಿರಿ ಆದದ್ದು.

ಆರೇಳು ವರ್ಷಗಳ ಹಿಂದೆ ನನ್ನ ಚಿಕ್ಕಪ್ಪನ ಮಗಳ ಮದುವೆ ಬೆಂಗಳೂರಿನಲ್ಲಿ ಇತ್ತು. ಊರಿಂದ ಬಹಳ ಜನ ಬಂದಿದ್ದರು ಮದುವೆ ದಿನ ಸಂಜೆ ನಮ್ಮ ಚಿಕ್ಕಮ್ಮಂದಿರು ತಂಗಿಯರು ತಮ್ಮಂದಿರು ಎಲ್ಲಾ ನಮ್ಮನೆಗೆ ಬಂದಿದ್ದರು ದಿಲೀಪ MBA ಎಂಟ್ರೆನ್ಸ್ ನ ತಯಾರಿಗಾಗಿ ನಮ್ಮ ಮನೆಯಲ್ಲಿದ್ದು ಕೊಂಡು ಕ್ಲಾಸ್ ಗೆ ಹೋಗುತ್ತಿದ್ದ. ನನ್ನ ಭಾವನ ಮಗ ಗಿರಿಭಟ್ಟ (ಆಗ ಬರೀ ಗಿರಿಭಟ್ಟ ಈಗ ದೊಡ್ಡ ದೇವಸ್ಥಾನ ದ ಭಟ್ಟರು ಭಟ್ಟ ಎಂದರೆ ಸಿಟ್ಟು ಬಂದರೂ ಬರಬಹುದು) ನಮ್ಮ ಮನೆಯಲ್ಲೇ ಇದ್ದ. ಅವತ್ತು ಊರಿಂದ ಸಂತೋಷ,ದೀಪು,ಅಶ್ವತ್ತ ಎಲ್ಲಾ ಮದುವೆ ಗಾಗಿ ಬಂದಿದ್ದರು ಸಂಜೆ ಎಲ್ಲರ ದಂಡು ನಮ್ಮನೆಯಲ್ಲಿ ಸೇರಿತ್ತು. ಕೆರೆಕೊಪ್ಪದ ಕಾನ್ಲೇ ಮನೆತನದ ಎಲ್ಲ ಪಟಿಂಗರೂ ಬೆಂಗಳೂರಿನಲ್ಲಿ ಸೇರಿದ್ದೆವು ದಿಲೀಪ ಮತ್ತೆ ಅಶ್ವತ್ತ ಪಟಿಂಗರ ಹಾಜರಾತಿ ಪುಸ್ತಕದಲ್ಲಿ ಇಲ್ಲದಿದ್ದರೂ ನಮ್ಮ ಜೊತೆ ಸೇರುತ್ತಿದ್ದರು. ಅವತ್ತು ರಾತ್ರಿ ಊಟದ ನಂತರ ಒಂದು jakpot ಆಡಿ ಆಯಿತು ಕೆಲವರು ಇಸ್ಪೀಟ್ ಆಡುವವರಲ್ಲ, ಇನ್ನು ನಾನು ಸಂತೋಷ ಪುಕ್ಕಟ್ಟೆ ಆಡಲು ನಿದ್ದೆ ಬಿಡುವವರಲ್ಲ ಹೀಗಾಗಿ ಒಂದೇ pot ಗೆ ಬೇಜಾರು ಬಂತು.ದೊಡ್ದವರೆಲ್ಲಾ ಮಲಗಿದ್ದನ್ನ ಖಾತ್ರಿ ಮಾಡಿಕೊಂಡು ಸಂಗೀತಾ ವಾಹಿನಿಯರನ್ನ ಮಲಗುವಂತೆ ಹೇಳಿ ನಮ್ಮ ಹುಡುಗರ ತಂಡ ನಮ್ಮನೆ ಟೆರೇಸ್ ಮೇಲೆ ಮೀಟಿಂಗ್ ಸೇರಿತು. ಹುಡುಗರ ತಂಡ ಸೇರಿದರೆ ಅಲ್ಲಿ ನಡೆಯುವ ಮಾತುಕಥೆಯ ಬಗ್ಗೆ ಹೊಸದಾಗಿ ವಿವರಣೆ ಬೇಕಾಗುವುದಿಲ್ಲ. ಸುಮಾರು ಹೊತ್ತು ಅಕ್ಕಪಕ್ಕದವರಿಗೆ ತೊಂದರೆ ಆಗ...

Gujarati Funeral ...

A family in Gujarat was puzzled when the coffin of their dead mother (Ba) arrived from the US . It was sent by one of the daughters. The dead body was very tightly squeezed inside the coffin, with no space left in it when they opened the lid; they found a letter on top addressed to her brothers and sisters: Dear Chandrakantbhai, Arvindbhai, Smitaben and Varsha, I am sending Ba's body to you, since it was her wish that she should be cremated in the compound of our ancestral home in GUJARAT . Sorry, I could not come along as all of my paid leave is consumed. You will find inside the coffin, under Ba's body, cans of cheese, 10 packets of Tobler chocolates and 8 packets of Badam (peanuts) please divide these among all of you. On Ba's feet you will find a new pair of Reebok shoes (size 10) for Mohan. There are also 2 pairs of shoes for Radha's and Lakshmi's sons. Hope the sizes are correct. Ba is wearing 6 American T-Shirts. The large size is for Mohan. Just distribute t...

ಕಾಂಗರೂ ಎಂದರೆ ತೆರಿಯಾದು ಸ್ವಾಮಿ !

ಮೊನ್ನೆ ಯಾವುದೋ ಕಾರಣಕ್ಕೆ ನನ್ನ ಮ್ಯಾನೇಜರ್ ನ ರೂಮಿನೊಳಗೆ ಹೋದೆ ಅಲ್ಲಿ ಮೂರೂ ಮ್ಯಾನೇಜರ್ ಗಳೂ ಕುಳಿತು ನಗುತ್ತಿದ್ದರು. ನಾನು ಆಶ್ಚರ್ಯದ ಮುಖ ಮಾಡಿ ನಿಂತಾಗ ನನ್ನ ಜನರಲ್ ಮ್ಯನೆಜರ್ ವಿವರಣೆಗೆ ತೊಡಗಿದ. ನಿನಗೆ ಕಾಂಗರೂ ಗೊತ್ತೆ? ಹೂಂ ಕೇಳಿದ್ದೇನೆ TV ಯಲ್ಲಿ ನೋಡಿದ್ದೇನೆ. ಅದಕ್ಕೆ ಆ ಹೆಸರು ಹೇಗೆ ಬಂತು ಎನ್ನುವುದು ತಿಳಿದಿದೆಯೇ? ಇಲ್ಲ. ಆಸ್ತ್ರೇಲಿಯಾದಲ್ಲಿ ಮೊದಲು ಈ ಪ್ರಾಣಿ ಕಂಡು ಬಂತು ಯುರೋಪಿನ ಯಾತ್ರಿಗಳು ಆ ವಿಚಿತ್ರ ಪ್ರಾಣಿಯನ್ನ ನೋಡಿ ಅದೇನೆಂದು ಕೇಳಿದಾಗ ಸ್ಥಳೀಯರು ಕಾಂಗರೂ ಎಂದರು ನಂತರ ಅದೇ ಹೆಸರು ಶಾಶ್ವತವಾಯಿತು. ಎಂದ ಅದಕ್ಕೆ ನನ್ನದೇ ಶೈಲಿಯಲ್ಲಿ "ಈ ವಿಷಯಕ್ಕಾಗಿ ನೀವುಗಳು ನಗುತ್ತಿರುವುದಾದರೆ ನಾನೂ ನಗುತ್ತೇನೆ ಎಂದೆ" ಕಾಳೆಳೆಯುವ ಉತ್ಸಾಹದಲ್ಲಿ. ಅದಕ್ಕವನು ಇಲ್ಲ ಅದು ಹಾಗಲ್ಲ ಆಸ್ಟ್ರೇಲಿಯಾದ ಭಾಷೆಯಲ್ಲಿ ಕಾಂಗರೂ ಎಂದರೆ "ನನಗೆ ಅರ್ಥವಾಗಲಿಲ್ಲ"ಎಂದು ಅರ್ಥ ಎಂದ ಆಗ ನನಗೆ ನಗು ಬಂತು ನಮ್ಮ "ತೆರಿಯಾದು ಸ್ವಾಮಿ" ಕಥೆ ನೆನಪಾಯಿತು ನಾನೂ ನಕ್ಕೆ. ಅಷ್ಟರಲ್ಲಿ ನಮ್ಮ ಇನ್ನೊಬ್ಬ ಮ್ಯಾನೆಜರ್ ಯಾವುದೋ ಕೆಲಸದ ವಿಷಯವಾಗಿ ಏನೋ ಕೇಳಿದ ನಾನು ತಡಮಾಡದೆ ಕಾಂಗರೂ!!!!!!!!!!!!!! ಎಂದೆ ಅಲ್ಲಿ ಇದ್ದವರೆಲ್ಲ ಬಿದ್ದು ಬಿದ್ದು ನಕ್ಕರು. ಇದನ್ನ ಬರೆಯುತ್ತಾ ನನಗೆ ನನ್ನ ಹೈಸ್ಕೂಲಿನಲ್ಲಿ ನಡೆದ ಘಟನೆ ನೆನಪಾಯಿತು. ನಮ್ಮ ಕನ್ನಡ ಕ್ಲಾಸ್ ಟೆಸ್ಟ್ ಒಂದರಲ್ಲಿ ಲೋಪಸಂದಿಗೆ ಉದಾಹರಣೆ ಕೊಡಿ ಎ...

ಈ ಸಾವು ನ್ಯಾಯವೇ ?

ಕೆಲಸದ ಒತ್ತಡದಿಂದ ಹಾಗು ಮಾನಸಿಕ ತೊಳಲಾಟದಿಂದ ತಿಂಗಳು ಗಟ್ಟಲೆಯಿಂದ ಬ್ಲೋಗ್ ನಿಂದ ದೂರವಾಗಿ ಬಿಟ್ಟಿದ್ದೆ. ಮೊನ್ನೆ ಇದ್ದಕ್ಕಿದ್ದಂತೆ ನನ್ನ ಬಾಲ್ಯಸ್ನೇಹಿತ ದತ್ತಾತ್ರೇಯನ ಅಕಾಲಿಕ ಮರಣದ ಸುದ್ದಿ ಕೇಳಿದಾಗಿನಿಂದ ಮನಸ್ಸಿನ ಮೂಲೆಯಲ್ಲಿ ಬೇಸರ ಮಡುವುಗಟ್ಟಿ ನಿಂತಿದೆ. ನನ್ನ ಒಂದನೆತರಗತಿಯಿಂದ PUC ಯ ವರೆಗೆ ಯತಾರ್ಥದ ಸಹಪಾಠಿಯಾಗಿದ್ದ ದತ್ತ ಸಾಗರದಿಂದ ರಾತ್ರಿ ಹನ್ನೊಂದು ಗಂಟೆಗೆ ಬರುವಾಗ ಬೋರಿಡುವ ಮಳೆಯಲ್ಲಿ, ಮನೆಸೇರುವ ಒಂದು ಮೈಲಿ ದೂರದಲ್ಲಿ, ಜೀಪಿನ ರೂಪದಲ್ಲಿ ಬಂದ ಜವರಾಯನ ಪಾಶಕ್ಕೆ ಸಿಕ್ಕಿ ಬಿದ್ದಿದ್ದನಂತೆ. ನಾನು, ದತ್ತ ಹಾಗು ಅವಿನಾಶ ನಮ್ಮ ಬಾಲ್ಯಾವಸ್ತೆಯ ಪ್ರತಿಯೊಂದು ಶನಿವಾರ,ಭಾನುವಾರಗಳನ್ನೂ ಗೇರು ಹಕ್ಕಲಲ್ಲಿ ಮರ ಹತ್ತುತ್ತಾ, ನಮ್ಮಅಡಿಕೆ ತೋಟದ ಹೆಗ್ಗಾದಿಗೆಯಲ್ಲಿ ಮೀನು ಹಿಡಿಯುತ್ತಾ ಕಳೆದವರು. ಈಗ್ಗೆ ನಾಲ್ಕು ವರ್ಷದ ಹಿಂದೆ ಮೈಸೂರಿನಲ್ಲಿ ಓದುತಿದ್ದ ಅವಿನಾಶ ರಸ್ತೆ ಅಪಘಾತದಲ್ಲಿಯೇ ತೀರಿ ಕೊಂಡಿದ್ದ. ಆದರೆ ದತ್ತನ ಸಾವು ಮಾತ್ರ ನನ್ನನ್ನ ಹಲವಾರು ಕಾರಣಗಳಿಂದ ಚಿಂತಾಬ್ಧಿಯಲ್ಲಿ ಮುಳುಗಿಸಿದೆ. ಯಾರಿಗೂ ಒಂದು ದೊಡ್ಡ ಮಾತನಾಡದ, ತಾನಾಯಿತು ತನ್ನ ಕೇಬಲ್ ವ್ಯವಹಾರ ವಾಯಿತು ಎಂದು ಇದ್ದು ತನ್ನ ಹೆಂಡತಿ, ಎರಡು ವರ್ಷದ ಮಗು, ವಯಸ್ಸಾದ ತಂದೆ, ಈಗ ತಾನೆ ಕ್ಯಾನ್ಸರ್ ಆಪರೇಷನ್ ಗೆ ಒಳಗಾದ ತಾಯಿ, ಗಂಡ ಬಿಟ್ಟ ತನ್ನ ಅಕ್ಕ ಮತ್ತು ಅವಳ ಮಕ್ಕಳನ್ನ ಸಾಕುತ್ತಾ ಬದುಕಿದ ಕಷ್ಟಸಹಿಷ್ಣು ಎಲ್ಲರನ್ನ ನಡುನೀರಿನಲ್ಲಿ ಕೈ ಬಿಟ್ಟು ಹೋದದ್ದ...

ಕಾಮನ್ ಸೆನ್ಸ್

ಒಂದು ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ ಕಣ್ಣು ಬಡೀಲಿಲ್ಲ.. ಇವಳ್ಗೋ ಖುಶೀನೋ ಖುಶಿ.. ಅಂಗಡಿಗೆ ಹೋದ್ಲು ತರಕಾರಿ ತರೋಕಂತ. ಅಂಗಡಿಯ ಹೆಂಗಸಿಗೆ ಒಂದು ಸಾಮಾನು ಹೇಳೋದು ಸೆಲ್ಲ್ ಫೋನ್ ನಲ್ಲಿ ಟೊಯ್ ಟೊಯ್ ಅಂತ ಎಸ್ ಎಮ್ ಎಸ್ ಮಾಡೋದು ಮತ್ತೆ ಅಂಗಡಿಯಾಕೆ ಕೇಳಿದಾಗ ತಲೆ ಎತ್ತಿ ಇನ್ನೊನ್ದ್ ಸಾಮಾನ್ ಹೆಸರು ಹೇಳೋದು.. ಹೀಗೆ ಐದು ನಿಮಿಷ ನಡೀತು.. ಕೊನೆಗೆ ಈ ಹುಡುಗಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿದ್ದ ಸಾಮಾನೆಲ್ಲವನ್ನ ತಾನು ತಂದಿದ್ದ ಬ್ಯಾಗಿಗೆ ಹಾಕ್ಕೊಂಡು "ದುಡ್ಡು ಎಷ್ಟಾಯ್ತು" ಅಂತ ಕೇಳಿದ್ಲು.. ಅಂಗಡಿಯವ್ಳು: "ಎಪ್ಪತ್ತು ರೂಪಾಯಿ." ಹುಡುಗಿ ನೂರು ರೂಪಾಯಿ ಕೊಟ್ಳು.. ಅಂಗಡಿಯವ್ಳು: ಏನವ್ವ ನೀವು ದೊಡ್ಡ ಪಟ್ಟಣದವ್ರು ಅನ್ಸತ್ತೆ.. ತುಂಬಾ ಓದಿದೀರ ಅನ್ಸತ್ತೆ! ಹುಡುಗಿಗೆ ಖುಶಿ. ನನ್ ಬಟ್ಟೆ, ಸೆಲ್ಫೋನ್, ಆಧುನಿಕತೆ ನೋಡಿ ಈ ಹೆಂಗಸು ಹೀಗೆ ಹೇಳ್ತಾ ಇದಾಳೆ ಅನ್ಕೊಡ್ಳು. ಸರಿ ಹುಡುಗಿ ಕೇಳಿದ್ಲು "ಹೌದು ನಿನಗೆ ಹೇಗೆ ಗೊತ್ತಾಯ್ತು?" ಅಂಗಡಿಯವ್ಳು: "ಅಲ್ಲ ಈರುಳ್ಳಿ, ಆಲುಗೆಡ್ಡೆ, ಬೇಳೆ , ಸಕ್ಕರೆ ಎಲ್ಲ ಸಾಮನು ತಗೊಂಡು.. ಟೊಮಾಟೊನ ಮೊದಲು ಬ್ಯಾಗ್ ಒಳಗಡೆ ಹಾಕ್ಕಂಡ್ರಿ ನೋಡಿ ಆಗಲೆ ಗೊತ್ತಾಯ್ತು ಕಾಮನ್ ಸೆನ್ಸ್ ಇಲ್ಲ...

ಕನಸಿನ ಬೆಲೆ

ಮುಕುಂದರಾಯರು ಆಸ್ಪತ್ರೆಯ ICU ನಲ್ಲಿ ತಮ್ಮ ಕೊನೆಯ ದಿನಗಳನ್ನ ಕಳೆಯುತ್ತಿದ್ದಾರೆ. ತಾವು ವಾಸವಾಗಿರುವ ಅನಾಥಾಶ್ರಮದ ಆಯಾ ಚಂದ್ರಿಕ ಹೊರಗೆ ಆತಂಕದಿಂದ ಕುಳಿತಿದ್ದಾಳೆ. ಪಾಳಿಯ ನರ್ಸ್ ಗಳು ತಮ್ಮ ದಿನನಿತ್ಯದ ಕೆಲಸದಲ್ಲಿ ನಿರತರಾಗಿದ್ದಾರೆ.ಡಾಕ್ಟರರ ತಂಡ ದಿನಕ್ಕೆರಡು ಬಾರಿ ಬೇಟಿನೀಡಿ ತಮ್ಮತಮ್ಮಲ್ಲೇ ಗುಸುಗುಟ್ಟಿಕೊಂಡು ಹೊರನಡೆಯುತ್ತಾರೆ.ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಮುಕುಂದರಾಯರು ಆದರೆ ಅವರ ಆ ನಿಸ್ಸಹಾಯಕ ಸ್ತಿತಿ ಅವರನ್ನ ಮತ್ತೂ ಸಾವಿನ ಬಳಿ ಎಳೆದೊಯ್ಯುತ್ತಿದೆ ಮನಸ್ಸಿನ ಬಂಡೆಗೆ ಹಳೆಯ ನೆನಪುಗಳೆಂಬ ಅಲೆಗಳು ಪುಂಕಾನುಪುಂಕವಾಗಿ ಅಪ್ಪಳಿಸುತ್ತಿವೆ.ಕಣ್ಣಲ್ಲಿ ನೀರು ಧಾರೆಯಾಗುತ್ತಿದೆ. ಹಯವದನರಾಯರು ತುಮಕೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಮೊದಲನೇ ದರ್ಜೆಯ ಕ್ಲರ್ಕ್. ಪತ್ನಿ ಪ್ರಿಯಮ್ವಧ ಹಾಗು ಒಬ್ಬನೇ ಮಗ ಮುಕುಂದ ನೊಂದಿಗೆ ತುಮಕೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.ಯಾವತ್ತೂ ದುರಾಸೆ ಪಡದ ಸಜ್ಜನರಾದ ಹಯವದನರಾಯರಿಗೆ ಬರುವ ಸರ್ಕಾರೀ ಸಂಬಳವಷ್ಟೇ ಜೀವನಾಧಾರ.ತಮ್ಮ ಪ್ರಾಯದಲ್ಲಿ ಕೊಂಡ ಹೀರೋ ಸೈಕಲ್ಲಿಗೆ ಎರಡು ವರ್ಶಕ್ಕೊಮ್ಮೆ ಟಯರ್ ಬದಲಿಸುತ್ತಾ ಸುಮಾರು 4 ಮೈಲಿಗಳಷ್ಟು ದೂರದ ತಮ್ಮ ಕಛೇರಿಗೆ ಹೋಗಿಬರುತ್ತಿದ್ದರು.ಕಟ್ಟುನಿಟ್ಟಿನ ಜೀವನ ರೂಡಿಸಿಕೊಂಡು ಊರಿನವರಿಗೆಲ್ಲ ಆದರ್ಶವ್ಯಕ್ತಿ ಯಾಗಿದ್ದರು. ಮಗ ಮುಕುಂದನ ಇಂಜಿನಿಯರಿಂಗ್ ಗಾಗಿ ಅವನು ಹುಟ್ಟಿದಾಗಿನಿಂದಲೇ LIC ಕಟ್ಟುತ್ತಿದ್ದರು ಅವರ ಆಸೆಯಂತೆ ಮ...

"ಆಟ ಆಟ ಒಂದೇ ಒಂದು ಆಟ"

ಸಂಜೆ ಆಫೀಸಿನಿಂದ ಹೊರಡುವಾಗ ವಿಪರೀತ ಗಾಳಿ ಎದ್ದಿತ್ತು ಮರಳು ಗಾಡಿನ ಗಾಳಿಯ ಪುರ್ಣ ಪರಿಚಯವಿದ್ದ ಮನೇಜರ್ ಸ್ವಲ್ಪ ಹೊತ್ತು ಕಾದು ಗಾಳಿ ನಿಂತ ಮೇಲೆ ಹೋಗು ಎಂದರೂ ಕೇಳದೆ ನಾ ಕಾಣದ ಗಾಳಿ ಯಾವುದು ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಹೊರಟೆ ಸ್ವಲ್ಪ ದೂರ ಬರುವಷ್ಟರ ಹೊತ್ತಿಗೆ ಗಾಳಿಯ ಪ್ರಭಾವ ಸ್ವಲ್ಪ ತಿಳಿದಿತ್ತು ಆದರೂ ಬಿಸಿರಕ್ತ ಪ್ರವಾಹದ ವಿರುದ್ದ ಈಜುವ ಹುಮ್ಮಸ್ಸು,ಹುಂಬತನ ಕಾರಿನ ತೇಲಾಟವನ್ನೂ ಎಂಜಾಯ್ ಮಾಡುತ್ತ CD ಯಲ್ಲಿ ಕಾಳಿಂಗ ನಾವಡರ ಭಸ್ಮಾಸುರ ಮೋಹಿನಿ ಪದ್ಯ ಕೇಳುತ್ತಾ ಮುಂದುವರೆದೆ. ಒಂದು ಮೈಲಿಯ ದಾರಿಯ ನಂತರ ಸೂಪರ್ ಹೈವೇ ಸಿಕ್ಕಿತ್ತು ಎಂದಿನಂತೆ ಕಾರನ್ನ ಸ್ಪೋರ್ಟ್ಸ್ ಮೋಡಿಗೆ ಹಾಕಿ ಮೂರನೇ ಗಿಯರ್ ದಾಟದಂತೆ ಮಾಡಿಕೊಂಡು ಓಡೋಮೀಟರ್ 115 ರಲ್ಲಿ ನೆಲೆಗೊಳಿಸಿ ರಾಲ್ಫ್ ಶೂಮೇಕರ್ ನ ಮುಕಭಾವದಲ್ಲಿ ಮುಂದುವರೆದಿದ್ದೆ ಲಾಲಿಸು ದೇವರ ದೇವಾ ಸಂಜೀವ| ಪಾಲ ಲೋಚನ ರುಂಡ ಮಾಲ ಮಹದೇವ|| ನಾವಡರ ಕಪ್ಪು ಮೂರರ ಶೃತಿಯ ಪದ್ಯಕ್ಕೆ ನನ್ನ ಬೆರಳು ಸ್ಟಿಯರಿಂಗ್ ಮೇಲೆ ತಾಳ ಹಾಕಿತ್ತಿತ್ತು ನಾವಡರ ಪದ್ಯದ ಮುಕ್ತಾಯ ಮುರಿಯುವ ಕ್ರಮ ನನಗೆ ಇವತ್ತಿಗೂ ನುಂಗದ ತುತ್ತಾಗಿ ಕಾಡುತ್ತಿತ್ತು.ಕೋರೆತಾಳದ ಮುಕ್ತಾಯ ಮುರಿವುವುದನ್ನೇ ಕಾದು ತಾಳ ಹಾಕಿ ಮುಗಿಸುವ ಸಲುವಾಗಿ ಗಮನ ಆಕಡೆ ಕೊಟ್ಟಿದ್ದೆ ಬಂದ ಬಲ ಬದಿಯ ಸಣ್ಣ ತಿರುವು ಗಮನಿಸಲೇ ಇಲ್ಲ 110 km/h ಕಾರು ಬಲತಿರುವಿನಲ್ಲಿ ಆಯತಪ್ಪಿ ಪಲ್ಟಿಯಾಯಿತು ಪಕ್ಕದಲ್ಲಿದ್ದ 24 ಚಕ್ರದ ದೈತ್ಯ ಟ್ರಕ್ಕಿನ ಕೆ...

ಯಕ್ಷಾಭಿಮಾನಿ ಎಂಬ ಹೊಸ ಬ್ಲೊಗ್.

ಯಕ್ಷಗಾನ ಎಂದಾಕ್ಷಣ ಎಂತಹಾ ಮನಸ್ತಿತಿಯಲ್ಲೂ ಪುಳಕೋತ್ಸವ ಅನುಭವಿಸುತ್ತೇನೆ. ಯಕ್ಷಗಾನದ ಬಗ್ಗೆ ಗೊತ್ತಿದ್ದದ್ದನ್ನ ಹೇಳಲು,ಗೊತ್ತಿಲ್ಲದ್ದಿದ್ದನ್ನ ತಿಳಿದು ಕೊಳ್ಳಲು ಒಂದು ಬ್ಲೋಗ್ ಪ್ರಾರಂಭಿಸಿದ್ದೇನೆ.ಸದಭಿರುಚಿಯ ಎಲ್ಲ ಸ್ನೇಹಿತರಿಗೂ ಮುಕ್ತವಾಗಿ ಚರ್ಚಿಸಲು ಇದು ಒಂದು ವೇದಿಕೆಯಾದರೆ ನನ್ನ ಶ್ರಮ ಸಾರ್ಥಕ. ನನ್ನ ಎಲ್ಲ ಯಕ್ಷಮಿತ್ರರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ.

ಮಿ||ಬಕರ

Image
"ಎಲ್ಲಾ ಬಿಟ್ಟ ಮಗ ಬಂಗಿನೆಟ್ಟ" ಅನ್ನೋ ಹಾಗೆ ಫಿನಾನ್ಸಿಯಲ್ ಇನ್ಫ್ಲೇಷನ್ ನಿಂದ ಕೆಲಸ ಕಳಕೊಂಡು ಸರ್ಕಸ್ ಕಂಪನಿ ಸೇರಿಕೊಂಡ ಅಂದುಕೊಂಡಿರ? ಅಲ್ಲ ಮೇಲಿನ ಫೋಟೊ ಸರ್ಕಸ್ ನೊಡಲು ಹೊಗಿ ಜೊಕರ್ ಗಳಿಂದ ಬಕರಾ ಆಗಿದ್ದು. ಜೀವನದಲ್ಲಿ ಇಲ್ಲಿಯ ವರೆಗೆ ಬೇರೆಯವರಿಗೆ ತರಾವರೀ ತಮಾಷೆಯ ಟೋಪಿ ಹಾಕುತ್ತಿದ್ದ ನಾನು ಖತಾರ್ ಗೆ ಬಂದು ಬಣ್ಣ ಬಣ್ಣದ ಟೋಪಿ ಹಾಕಿಸಿಕೊಂಡ ಕಥೆ ಹೇಳುವ ಮೊದಲು ನಾ ಹಾಕಿದ ತರಾವರಿ ಟೋಪಿಗಳ ಬಗ್ಗೆ ಹೇಳಬೇಕಾಗಿದೆ. ಈ ಹಿಂದೆ ಹುಚ್ಚು ಕೋಳಿ ಮನಸು ಬ್ಲೊಗ್ ನಲ್ಲಿ ಬರೆದಂತೆ ನಾ ಫೋನ್ ಮಾಡಿ ಜನರನ್ನ ಬಕರ ಮಾಡಿದ್ದು ಲೆಕ್ಕವಿಲ್ಲ. ಮಳಯಾಳಿ ಪೀಟರ್ ನ ಹಾಗೆ ಮಾತನಾಡಿ ಒಬ್ಬರನ್ನ,ಚಿಟ್ಟಾಣಿ ಅಜ್ಜನ ಸ್ವರ ತೆಗೆದು ಒಬ್ಬರನ್ನ, ಕೋಟ ಶಿವಾನಂದನಾಗಿ ಇನ್ನೊಬ್ಬರನ್ನ,ಹೋಂಡ ಶೋರೂಂ ನವನ ಸ್ವರದಲ್ಲಿ ಇನ್ನೊಬ್ಬರನ್ನ, ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಕಾಲಚಕ್ರ ತಿರುಗಿ ನಾನು 25 ಜನರ ಕಿಕ್ಕಿರಿದ ಜನಸ್ತೋಮದ ಮದ್ಯೆ ಕುರಿ ಆಗಲು ಬಹಳ ದಿನ ಹಿಡಿಯಲೇ ಇಲ್ಲ. ನಡೆದದ್ದು ಇಷ್ಟೆ......... ಮೊನ್ನೆ ಗುರುವಾರ ಕತಾರ್ ನ ಹಯಾತ್ ಪ್ಲಾಝಾ ದಲ್ಲಿ ರಶ್ಯನ್ ತಂಡದವರಿಂದ ಸರ್ಕಸ್ ಇದೆ ಎಂದು ತಿಳಿದು ಬಂತು ಶುಕ್ರವಾರ ವಾರದ ರಜ ಆಗಿದ್ದರಿಂದ ರಾತ್ರಿ 8 ಗಂಟೆಯ ಶೋ ಗೆ ಹೋಗಿ ಕುಳಿತೆವು ರಶ್ಯನ್ ಸುಂದರಿಯರು ಸೂರಿನಿಂದ ಇಳಿಬಿಟ್ಟ ಬಟ್ಟೆಗೆ ಜೋತುಬಿದ್ದು ಅದನ್ನ ಮೈಮೇಲೆ ಸುತ್ತಿಕೊಳ್ಳುತ್ತಾ ಮೇಲೆ ಹೋಗಿ ಒಮ್ಮೆಲೇ ಹಗ್ಗವನ್ನ ಬಿಟ್ಟು ತಿರುಗುತ್ತ...

ಹ್ಯಾಪಿ ವ್ಯಾಲೈಂಟೈನ್ಸ್ ಡೇ!!!

Image
"My bounty is as boundless as the sea, My love as deep; the more I give to thee, The more I have, for both are infinity ಇದೇನಿದು ದೊಡ್ಡ ದೊಡ್ದ ಶಬ್ದ ಗಳನ್ನೆಲ್ಲ ಸೇರಿಸಿ ವಾಕ್ಯ ರಚಿಸುವಷ್ಟು ಇವ ಎಲ್ಲಿ ಕಲಿತ ಎಂದು ಯೋಚಿಸಿದಿರ? ಸರಿ ಇದು ನಾ ಬರೆದಿದ್ದಲ್ಲ ಪುಣ್ಯಾತ್ಮ ಶೇಕ್ಸ್ ಫಿಯರ್ ರೋಮಿಯೋ ಜ್ಯುಲಿಯೆಟ್ ನಾಟಕದಲ್ಲಿ ಬರೆದದ್ದು. ಮುಂದೆ ಕಾಮೆಂಟ್ ಮಾಡಿ ಅದರ ಅರ್ಥ ಕೇಳಬಾರದೆಂಬ ದು(ದೂ)ರಾಲೋಚನೆ ಇಂದ ನಾ ಇದನ್ನ ಅಲ್ಲಿಂದ ಕದ್ದು ಬಟ್ಟಿ ಇಳಿಸಿದ ವಿಷಯ ಮೊದಲೇ ಹೇಳಿದ್ದೇನೆ ಇಷ್ಟಾದಮೇಲೂ ಅರ್ಥವನ್ನ ಕೇಳಿಯೇ ಕೇಳ್ತೀರಿ ಎಂದಾದರೆ ಅವ ಬರೆದದ್ದನ್ನ ಹುಡುಕಿ ತೆಗೆದ ನನಗೆ ಅದರ ಅರ್ಥ ಹುಡುಕುವುದು ಕಷ್ಟ ಅಲ್ಲ. ತಲೆ ತಿಂದಿದ್ ಸಾಕು ವಿಷಯ ಹೇಳು ಎಂದು ಬೈಕೊಳ್ಳುವ ಮೊದಲು ಹೇಳಿಬಿಡುತ್ತೇನೆ Happy valentine's day. New year day ಅಂತೆಯೇ ಇದೂ ಕೂಡ ನಮ್ಮದಲ್ಲದ ಆಚರಣೆ ಇಂತಹಾ ನಮ್ಮದಲ್ಲದ ಎಷ್ಟೋ ಆಚರಣೆ ಗಳನ್ನ ನಮ್ಮದಾಗಿಸಿಕೊಂಡ ಕೀರ್ತಿಗೆ ನಾವು ಪಾತ್ರರು. ಮೊದಮೊದಲು ಕೇವಲ coffe day ಸಂಸ್ಕೃತಿ ಚಾಲ್ತಿಯಲ್ಲಿರುವ ದೊಡ್ದ ನಗರಗಳಲ್ಲಿ ಮಾತ್ರ ಆಚರಿಸುತ್ತಿದ್ದ ಈ ವ್ಯಾಲೆಂಟೈನ್ಸ್ ಡೇ ಈಗ ಹಳ್ಳಿಗಳಲ್ಲಿ ಕೂಡ ಆಕ್ರಮಿಸಿ ಕೊಳ್ಳತೊಡಗಿದೆ. ಹೊಸದಾಗಿ ಕಾಲೇಜಿಗೆ ಸೇರಿದ ಹುಡುಗ ಹುಡುಗಿಯರು ಫೆಬ್ರುವರಿ 14 ರಂದು ಹಸಿರು ಬಟ್ಟೆ ಧರಿಸಿ ಹೋಗುವುದನ್ನ ಗಮನಿಸಿದ್ದೇನೆ.ಅವರಲ್ಲಿ ಈ ಆಚರಣೆಯ ಗು...

ಒಣ್ ವೇ, ಣೋ ಎಂಡ್ರಿ, ಗಿವ್ ವೇ, ಣೋಪಾರ್ಕಿಂಗ್.

ಡ್ರೈವಿಂಗ್ ಸ್ಕೂಲಿನ ವೈಟಿಂಗ್ ರೂಮಿನಲ್ಲಿ ಕುಳಿತು ಹೊತ್ತು ಹೋಗದಿದ್ದಾಗ ಒಂದು ಬ್ಲೊಗ್ ಬರೆಯೋಣ ಎನಿಸಿತ್ತು. ನನ್ನ ಕ್ಲಾಸ್ ಇರುವುದು ಸಂಜೆ 6-45 ಕ್ಕೆ ಆದರೆ 5-00 ಕ್ಕೆ ಆಫೀಸಿನಿಂದ ಹೊರಟರೆ ಅರ್ದ ಗಂಟೆಯಲ್ಲಿ ಇಲ್ಲಿಗೆ ಬಂದು ಸೇರಿರುತ್ತೇನೆ. ಸುಮಾರು ಒಂದೂಕಾಲು ತಾಸು ಸುಮ್ಮನೆ ಕೂರುವುದು ನನಗೋ ನನ್ನಂಥವರಿಗೋ ಸುಲಭದ ಮಾತಲ್ಲ. ಪರದೇಶಿ ಆದ್ ಮೇಲೆ ದಿನದ ಹತ್ತು ತಾಸು ಇಂಟರ್ನೆಟ್ಟ್ ಗೆ ಕಚ್ಚಿಕೊಳ್ಳುವ ದುರಬ್ಯಾಸ ಬೆಳೆಸಿಕೊಂಡಿದ್ದೇನೆ.ಇಲ್ಲಿ ವೈರ್ ಲೆಸ್ ಇಂಟರ್ ನೆಟ್ ಇದ್ದಿದ್ದರೆ ಬ್ಲೊಗ್ ಬರೆಯಲು ಪುರುಸೊತ್ತು ಇರುತ್ತಿರಲಿಲ್ಲವೇನೋ. ಅಂತೂ ಇಂತು ಆಫೀಸಿನಲ್ಲಿ ಚತುರೋಪಾಯ ಬಳಸಿ ಖತಾರ್ ನ ರೆಸಿಡೆನ್ಸ್ ಪರ್ಮಿಟ್ಟ್ ಮಾಡಿಸಿಕೊಂಡೆ.ಅದಿಲ್ಲದೆ ಇದ್ದರೆ ಇರಲೇ ಸಾದ್ಯವಿಲ್ಲದೆ ಇದ್ದರೂ RP ಪಡೆಯಲಿಕ್ಕೆ ಸತತ ನಾಲ್ಕು ತಿಂಗಳ ಪ್ರಯತ್ನ ಬೇಕಾಯಿತು.ಅದಾದ ನಂತರವೇ ಪಾಟೀ ಚೀಲ ಹಿಡಿದು ಡ್ರೈವಿಂಗ್ ಸ್ಕೂಲ್ ಬಾಗಿಲಲ್ಲಿ ನಿಂತೆ ಇಲ್ಲಿ ಡ್ರೈವಿಂಗ್ ಸ್ಕೂಲಿನಲ್ಲಿ ಹೆಸರು ಸೇರಿಸಿದ ಮೇಲೆ ಕ್ಲಾಸ್ ಶುರುವಾಗಲು ಮೂರು ತಿಂಗಳಾದರೂ ಬೇಕಂತೆ, ದಿನಕ್ಕೆ ಮುಕ್ಕಾಲು ಗಂಟೆ ಯಂತೆ ಸತತ ನಲವತ್ತು ದಿನವಾದ ಮೇಲೆ ಟೆಸ್ಟ್ ಕೊಡಬೇಕಂತೆ, Lಅಂತೆ pocket parking ಅಂತೆ ಸೀಟ್ ಬೆಲ್ಟ್ ಅಂತೆ,ಸೀಟ್ ಸರಿಮಾಡಿಕೊಳ್ಳಬೇಕಂತೆ, ಭಾರತೀಯರನ್ನ ಮೊದಲ ಭಾರಿ ಪಾಸ್ ಮಾಡಿದರೆ inspector ನ ಘನತೆಗೆ ಕಡಿಮೆಯಂತೆ, ಮೂರು ಅವಕಾಶಗಳಲ್ಲಿ ಪಾಸ್ ಮಾಡಬೇಕಂತೆ,ಇಲ್ಲವಾದರೆ ಲೈಸೆನ...

ಶಂಭಜ್ಜರಿಗೆ ಅಂತಿಮ ನಮನ

ಬೆಳಿಗ್ಗೆ 6-30 ಕ್ಕೆ ಮಿತ್ರರಾದ A N ಹೆಗಡೆಯವರ ಫೋನ್ ಕಾಲ್ ಬಂತು ಅಷ್ಟು ಹೊತ್ತಿನಲ್ಲಿ ಕರೆ ಬಂದದ್ದನ್ನ ನೋಡಿದರೆ ಏನೋ ಆಗಬಾರದ್ದು ಆಗಿದೆ ಎಂದು ತರ್ಕಿಸುತ್ತಾ ಫೊನ್ ತೆಗೆದರೆ ಅದು ನಿಜವಾಗಿತ್ತು.ಯಕ್ಷಗಾನದ ಧೀಮಂತ ಚೇತನ ಕೆರೆಮನೆ ಶಂಭು ಹೆಗಡೆಯವರು ತೀರಿ ಹೋದರು ಎಂಬ ವಿಷಯವನ್ನು ವಿಷಾದದ ದ್ವನಿಯಲ್ಲಿ ಹೇಳಿದರು.ಶಂಭು ಹೆಗಡೆಯವರಂತ ಮೇರುಸದೃಷರ ಅಕಾಲಿಕ ಮರಣದ ವಾರ್ತೆ ನನ್ನಂತಹಾ ಅಪ್ಪಟ ಯಕ್ಷಗಾನ ಅಭಿಮಾನಿಗೆ ಅಘಾತ ಮಾಡದೇ ಉಳಿಯಲಿಲ್ಲ. ಸದಾ ಅದ್ಯಯನ ಶೀಲರಾದ ಅವರು ಸುಮಾರು ನಾಲ್ಕಕ್ಕೂ ಹೆಚ್ಚು ದಶಕಗಳ ಕಾಲ ಯಕ್ಷಗಾನ ರಂಗಸ್ಥಳವನ್ನು ಆಳಿ,ಅನುಭವಿಸಿ,ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಅಭಿನಯಿಸುವ,ವಿಮರ್ಶಿಸುವ,ನಿರ್ದೇಶಿಸುವ ಸಮರ್ಥರು.ತಂದೆ ಶಿವರಾಮ ಹೆಗಡೆ ಯವರ ಕಾಲದಿಂದ ನಡೆಸಿಕೊಂಡು ಬಂದ ಇಡುಗುಂಜಿಮೇಳಕ್ಕೆ ಹೊಸ ರೂಪ ಕೊಟ್ಟು ಹಲವಾರು ಪಾತ್ರಗಳನ್ನ ತಮ್ಮದೇ ಕಲ್ಪನೆಯಲ್ಲಿ ಜೀವ ಕೊಟ್ಟು ಅನುಕರಣೀಯರೂ,ಅನುಸರಣೀಯರೂ ಆದವರು. ಯಕ್ಷಗಾನಕ್ಕೆ ಅವರ ಮುಂದಿನ ಪೀಳಿಗೆಗೆ ಹಲವಾರು ಕೊಡುಗೆಗಳನ್ನ ಕೊಟ್ಟ ಧೀಮಂತ.ಯಕ್ಷಗಾನ ಹಾಗು ಜಾನಪದ ಅಕಾಡಮಿಯ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಹಲಾವಾರು ಪ್ರತಿಭಾನ್ವಿತ ಕಲಾವಿದರನ್ನ ಗುರುತಿಸಿ ಪುರಸ್ಕರಿಸಿದ್ದಾರೆ. ”ಮಡದಿ ಜಾನಕಿ ಮೊದಲೇ ಪೂದಳು"”ನೋವುನಲಿವುಳಿಂದ ಕೂಡಿದ ಜೀವನವ ಕಂಡಾಯ್ತು" ಎಂಬ ಪದ್ಯಗಳಿಗೆ ಶಂಬಜ್ಜರ ನಿರ್ಯಾಣದ ರಾಮ ತನ್ನ ಜೀವನ ವನ್ನ ಅವಲೋಕಿಸುವಾಗ ಸಭೆಯಲ್ಲಿದ್ದವರಲ್ಲಿ ಕಣ...

ನಂಬಕೂಡದ ಸತ್ಯಕಥೆ.

"ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ" ಇದು ನಾ ಕೇಳಿದ ಕಥೆಗಳೆಂಬ ಕಥೆಗಳ ಪ್ರಾರಂಭ. ಕಥೆ ಕೇಳಿದ್ದೇನೆ, ಕಥೆ ಹೇಳಿದ್ದೇನೆ, ಕಥೆ ಕಟ್ಟಿದ್ದೇನೆ, ಆದರೆ ಕಥೆ ಬರೆಯುವ ಸಾಹಸ ಮಾಡಿರಲಿಲ್ಲ ಅದೊಂದು ಆಗಿ ಹೋಗಲಿ ಎಂದು ಶುರು ಮಾಡಿದ್ದೇನೆ. "ದಾರಿಯಲ್ಲಿ ಹೋಗುವವರು ಬೈದರೆ ನಿನಗೆ ಬುದ್ದಿ ಬರುತ್ತದೆ" ನಮ್ಮ ಸೂರಜ್ಜನ ಮಾತಿನಂತೆ ನೀ ಬರೆದಿದ್ದು ಸಾಕು ಮಾರಾಯ ನಿಲ್ಲಿಸು ಎಂದು ಬೆರೆಯವರು ಹೇಳುವ ವರೆಗೂ ಬರವಣಿಗೆ ಮುಂದುವರೆಸುವ ಸಂಕಲ್ಪ ಮಾಡಿದ್ದೇನೆ. ರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆ ಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತ ವಾಗಿ ಅಳುತ್ತಿದ್ದ ಸಂತೂವನ್ನು ಸಮಾದಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೊಗ ಎಂದರೆ ಕೆಲವರಿಗೆ ಹಾಗೆಯೇ ಒಂದುದಿನದಲ್ಲಿ ಅತ್ತೂ ಕರೆದು ಕಾಲಿ ಆಗುವುದಲ್ಲ ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ತಂದೆಯನ್ನ ಬಿಟ್ಟು ಬದುಕುವ ಸ್ವಪ್ನ ಕಾಣುವುದೂ ಸಾದ್ಯವಾಗಿರಲಿಲ್ಲ. ಕೇವಲ 16 ಮಳೆಗಾಲ ಕಳೆದ ಅವನಾದರೂ ಎರಡು ದಿನಗಳಿಂದ ಅತ್ತೂ, ಅತ್ತೂ ಕಣ್ಣೀರು ತಾತ್ಕಾಲಿಕ ವಾಗಿ ಬತ್ತಿ ಹೋಗಿತ್ತು ಮನಸ್ಸು ತುಂಬ ಊಟಮಾಡಿ ಎಷ್ಟು ದಿನವಾಗಿತ್ತೋ ದೇವರೇಬಲ್ಲ ಸ್ವರ ಬಿಚ್ಚಿ ಅಳುವ ಚೈತನ್ಯವನ್ನೂ ಕಳಕೊಂಡಿದ್ದ. ನಮಗಾಗಿ ಎಷ್ಟು ದಿನ ಬರೇ ನೀರು ಕುಡಿದು ದಿನವನ್ನ ಮುಗಿಸಿದ ಬಾಬಾ (ಅಪ್ಪ)ನನ್ನ ಉ...

ಕರ್ವಾ ಎಂಬ ಮರೀಚಿಕೆ.

Image
ಮೇಲೆ ರಣ ಬಿಸಿಲು, ಕೆಳಗೆ ಕಾದ ಮರಳು,ಬಗಲಲ್ಲಿ ಬಾರದ ಲ್ಯಾಪ್ ಟೊಪ್ ಬ್ಯಾಗು, ಸಾಲದ್ದಕ್ಕೆ ಡ್ರೈವರ್ ರಜ. ಟ್ಯಾಕ್ಸಿ ಕಾದು ಕಾದು ಸಾಕಾದಾಗ ಮುತ್ತುಮಾವನ ಚುಟುಕ ನೆನಪಾಯಿತು. " ಬೆಂಗಳೂರಿನ ಸಿಟಿ ಬಸ್ಸುಗಳೆಂದರೆ ಕಷ್ಟಗಳಿದ್ದಂತೆ ಮಗನೆ| ತಿಳಿಸಿ ಬಾರವವು ಬಂದರೆ ಒಂದರ ಹಿಂದೊಂದು ಬರುವವು ಮಗನೆ|| " ಅಂದ ಹಾಗೆ ನಾ ಇವತ್ತು ಬರೆಯಲಿಕ್ಕೆ ಹೊರಟಿರುವುದು ಖತಾರೆಂಬ ಮರಳುಗಾಡಿನ ಸರ್ಕಾರೀ ಸ್ವಾಮ್ಯದ "ಕರ್ವಾ" ಟ್ಯಾಕ್ಸಿ ಯ ಬಗ್ಗೆ. "ಕರ್ವಾ" ಇದು ಖತಾರಿನ ಸರ್ಕಾರೀ ಸಾರ್ವಜನಿಕ ಸಂಚಾರೀ (ಅ)ವ್ಯವಸ್ತೆ. ಇಲ್ಲಿ ಇದು ಬೇಕಾಗಿರುವುದು ಸ್ವಂತ ಕಾರಿಲ್ಲದವರಿಗೆ ಅಥವಾ ನನ್ನಂತೆ ಬಂದ ಹೊಸತರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆವುವ ವರೆಗೆ ಮಾತ್ರ ಯಾವುದೇ ಅರಬ್ಬೀ ಇದನ್ನ ನಂಬಿಕೊಂಡಿಲ್ಲ. ತೊಂದರೆ ಆಗುವುದು ನಮ್ಮಂತವರಿಗೆ ಆದ್ದರಿಂದ ದೊಡ್ಡತಲೆ ಗಳು ಇದರಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ. ಹಾಗಂತ ನಿಮಿಷಕ್ಕೊಂದು ಚೋರೀ ಟ್ಯಾಕ್ಸಿ (ಪ್ರೈವೇಟ್ ಟ್ಯಾಕ್ಸಿ) ಗಳಿದ್ದರೂ ಹೆಸರೇ ಹೇಳುವಂತೆ ಕಾನೂನುಬಾಹಿರ ವಾದ್ದರಿಂದಲೋ,ಬಿಲ್ಲ್ ಸಿಗದೇ ಅದನ್ನ ಕೈಇಂದ ಕೊಡಬೇಕಾಗಿರುವುದರಿಂದಲೋ ಏನೋ ಅದರಲ್ಲಿ ಹೋಗಲು ಮನಸ್ಸು ಒಡಂದಡುವುದಿಲ್ಲ. ಹಾಗಂತ ಕಾನೂನು ಬಾಹಿರವಾದದ್ದನ್ನ ಮಾದಲೇ ಇಲ್ಲ ಎಂದಲ್ಲ ಸುಮಾರು 8 ವರ್ಷ ಗಳ ಕಾಲ DL ಇಲ್ಲದೇ ಕಾರು ಓಡಿಸಿದ್ದೇನೆ. ಯಾವುದೇ ಕ್ರೆಡಿಟ್ ಕಾರ್ಡ್ ನಲ್ಲೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ.ಆದರೆ ಈ ...

Happy New Year!!!!!!!!!!!!!!!!!!!!!!!!!!!!!!

ಮೊಟ್ಟ ಮೊದಲನೆಯದಾಗಿ ಸರ್ವರಿಗೂ ಹೊಸವರ್ಷದ ಶುಭಾಶಯಗಳು.ನೊಡ ನೋಡುತ್ತಿದ್ದಂತೆ ಮತ್ತೊಂದು ವರ್ಷ ಕಳೆದೇಹೋಯಿತು. ವರುಷ ನೂರಾಯುಷ್ಯವು ಅದರೊಳಗಿರುಳು ಕಳೆದೈವತ್ತು| ವಾರ್ದಕ್ಯ ಬಾಲ್ಯ ಕೌಮಾರದಲಿ ಮೂವತ್ತು|| ಎಂಬಂತೆ ಇದು ನನಗೆ 30ನೆಯ ಹೊಸ ವರ್ಷ ಆಟ ಆಡುತ್ತಾ,ನೋಡುತ್ತಾ ಜೀವನದ ಅರ್ದ ಆಯುಷ್ಯ ಕಳೆದೇ ಹೋಯಿತು.ಯಾವುದೇ ಸಾಧನೆ ಇಲ್ಲದೇ ಅರ್ದ ಆಯುಷ್ಯವನ್ನ ಕಳೆದ ಬಗ್ಗೆ ವಿಷಾದ ಒಂದು ಕಡೆಗಾದರೆ, ಗೆದ್ದ,ಸಂಪಾದಿಸಿದ,ಅದಾಗಿ ಸೇರಿಕೊಂಡ ಸ್ವಲ್ಪದ ಬಗ್ಗೆ ಅಲ್ಪತೃಪ್ತಿ ಇದೆ. ಯಾರದ್ದೋ ಆದ ಹೊಸವರ್ಷದ ಆಚರಣೆಯನ್ನ ನಾಚಿಕೆ ಇಲ್ಲದೆ ನಮ್ಮದಾಗಿಸಿ ಕೊಂಡು ಸಂಭ್ರಮ ಪಡುವವರಲ್ಲಿ ನಾನು ಮೊದಲಿಗನೂ ಅಲ್ಲ ನನ್ನಿಂದಾಗಿ ಇದು ಕೊನೆಯಾಗುವುದೂ ಇಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಒಂದು ವಾರದ ಮುಂಚಿನಿಂದ ಹೊಸ ವರ್ಷಾಚರಣೆಯ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆದು ಕೊನೆಗೆ ಯಾವುದೂ ಫಲಿಸದೇ ಹೋದಾಗ ನಾನು ಶ್ಯಾಮ ಮನೆಯಲ್ಲೇ ಆಚರಿಸುವ ನಿರ್ದಾರಕ್ಕೆ ಬರಬೇಕಾಯಿತು. E-mail, SMS Phone ಗಳಲ್ಲಿ ಶುಭಾಶಯಗಳನ್ನ ತಿಳಿಸಿ ಊಟ ಮಾಡಿ ಮಲಗುವಾಗ ಸುಮಾರು ಮೂರು ಗಂಟೆ ಆಗಿರ ಬಹುದು. ಆಗ ನನ್ನ ಹಿಂದಿನ ಹೊಸ ವರ್ಷಾಚರಣೆಗಳ ಸಿಹಿ,ಕಹಿ ಅನುಭವಗಳ ನೆನಪಿನ ಬುತ್ತಿ ತೆರೆದುಕೊಂಡಿತು. 1996 ರಲ್ಲಿ ಬೆಂಗಳೂರಿಗೆ ಬರುವ ವರೆಗೆ ನನ್ನ ಡಿಸೆಂಬರ್ 31 ಗಳು ಪ್ರಸಾರ ಕಪ್ಪು ಬಿಳುಪು ಆಗಿದ್ದವು. ಅದರ ನಂತರ ಪ್ರತೀವರ್ಷವೂ ಹೊಸ ಹೊಸ ಅನುಭವಗಳನ್ನೇ ಕೊಡತೊಡಗಿದವು. ದಿನ ಬೆಳಗಾದ...

ಶೇಟ್ಟಿ ಪುಟ್ಟ ನಿಂದ Voip call ವರೆಗೆ.

ಮನೆಯಲ್ಲೇ ಅಡಿಗೆ ಮಾಡಿಬಿಡಬೇಕೆಂಬ ನಿರ್ಧಾರ ಮಾಡಿ ಸಂಜೆ ಮನೆಯಲ್ಲಿ ಕುಳಿತು ಇವತ್ತಿನ ಅಡಿಗೆಯ ಬಗ್ಗೆ ಯೋಚಿಸುತ್ತಿದ್ದೆ. ಮೂರು ದಿನಗಳಿಂದ ರಜ ಅಗಿದ್ದು, ಶಾಮನೂ ಊರಿಗೆ ಹೋಗಿದ್ದರಿಂದ ಅಣ್ಣನ ಮನೆಯಲ್ಲೆ ಊಟ ವಸತಿ ಎಲ್ಲ ಮುಗಿಯುತ್ತಿತ್ತು. ಅತ್ತಿಗೆಯ ಅಡಿಗೆ ಊಟ ಮಾಡಿ ಮಾಡಿ ಸೋಮಾರಿಯಾಗಿ ಬಿಟ್ಟಿದ್ದೆ. ಇವತ್ತು ಮನೆಯಲ್ಲಿ ಇರುವ ತರಕಾರಿ ಎಲ್ಲ ಖಾಲಿ ಮಾಡಬೇಕೆಂದು ಕೊಂಡು ಎಲ್ಲ ತರಾಕಾರಿ ಹೆಚ್ಚಿ ಇಟ್ಟು ಬೇಳೆ ಅನ್ನ ಕೊಕ್ಕರ್ ನಲ್ಲಿಟ್ಟು ಲ್ಯಾಪ್ ಟಾಪ್ ಓನ್ ಮಾಡಿದೆ. ಒಂದು ಸಾರಿ ಇವತ್ತಿನ share market status,personal mails,ಮತ್ತೆ orkut Scraps ನೋಡಿ ಮುಗಿಸುವಷ್ಟರಲ್ಲಿ ಅರ್ದ ಘಂಟೆ ಕಳೆಯಿತು.ನನಗೆ ಬಂದ ಎಲ್ಲಾ ತರಲೆ Mail ಗಳೀಗೂ ಅಂತದ್ದೇ ತರಲೆ replay ಮಾಡಿ, orkut ನ ಹೊಸ ಫೊಟೊ ಗಳಿಗೆ ನನ್ನದೇ ಶೈಲಿಯ comment ಬರೆದು ಮುಗಿಸಿ ಅಮ್ಮನ ಹತ್ತಿರ ಕುಷಲೋಪರಿ (g chat ನಲ್ಲಿ) ಮುಗಿಸುವಷ್ಟರಲ್ಲಿ are you there? ಎಂಬ g chat ನ ಕರೆ ಬಂತು. ಸ್ವಲ್ಪ ಉದ್ದವಾದರೂ ಇಷ್ಟೊತ್ತು ಬರೆದದ್ದು ಪೀಠಿಕೆ ಇನ್ನು ಮುಂದೆ ಬರೆಯುವುದು ವಿಷಯ! ಕರೆ ಬಂದ ಕಡೆ ತಿರುಗಿ ನೋಡಿದರೆ ಅದು ನನ್ನ ಹೈಸ್ಕೂಲ್ ಸ್ನೆಹಿತನದ್ದು ಅವ ಇರುವುದು ಲಂಡನ್ ನ ಮೂಲೆಯಲ್ಲಿ,ನಾನು ಖತಾರೆಂಬ ಇನ್ನೊಂದು ಮೂಲೆಯಲ್ಲಿ, ಹಾಗಂತ ನಾವು ಆಡಿದ್ದು ಬೆಳೆದದ್ದು ನಮ್ಮ ಊರಿನಲ್ಲಿ "ಉದರನಿಮಿತ್ತಮ್ ಬಹುಕೃತ ವೇಷಮ್" ಎಂಬಂತೆ ಅವ ಓದು ಮುಗಿಸಿ ಕೆಲಸಕ್ಕಾಗಿ ಇ...

ಹುಚ್ಚು ಕೋಡಿ ಮನಸ್ಸು

Image
"ಹುಚ್ಚು ಕೋಡಿ ಮನಸ್ಸು ಈ ಹದಿನಾರರ ವಯಸ್ಸು" ಎನ್ನುವ ಹಾಡು ಜೀವನದ ಸಂತೋಷದ ಕ್ಷಣ ಅನುಭವಿಸಿದ ಮರುಕ್ಷಣ ನೆನಪಾಗುವುದು. (ಕೋಡಿಯೋ ಕೋಳಿಯೋ ನೆನಪಾಗುತ್ತಿಲ್ಲ) ದುರಾದೃಷ್ಟಕ್ಕೆ ನಾವು ಸಂತೋಷದ ಕ್ಷಣ ಅನುಭವಿಸುತ್ತುರುವಾಗ ಅಥವಾ ಅಂತಹಾ ಭ್ರಮೆ ಯಲ್ಲಿದ್ದಾಗ ಹಿಂದಿದ್ದವರು ಮೂರು"......." ವಯಸ್ಸಾದರೂ ಇನ್ನೂ ಮಂಗಾಟ ಬಿಟ್ಟಿಲ್ಲ ಎನ್ನುತ್ತಿರುತ್ತಾರೆ. ನನ್ನ ಮನಸ್ಥಿತಿ ಇದೇ ನೋಡಿ ಸ್ವಾಮಿ ನಗುತ್ತಾ,ಸಾದ್ಯವಾದಷ್ಟು ನಗಿಸುತ್ತಾ ಕಾಲ ಕಳೆಯುವುದು. ನೇರವಾಗಿ ಆಕ್ಷೇಪಿಸಿದವರಿಗೆ ಅಷ್ಟೇ ನೇರವಾಗಿ ಉತ್ತರಿಸುವುದರಿಂದ ನನ್ನ ಬಗ್ಗೆ ಗೊತ್ತಿರುವವರು ಕೊಚ್ಚೆಗೆ ಕಲ್ಲು ಎಸೆಯುವ ಮೂರ್ಖತನ ಮಾಡುವುದಿಲ್ಲ,ಹಿಂದಿನಿಂದ ಆಡಿಕೊಳ್ಳುವವರ ಬಗ್ಗೆ ನನಗೆ ಕನಿಕರ ಇರುವುದರಿಂದ ನಿರ್ಲಿಪ್ತ ಧೋರಣೆ ತಾಳುತ್ತೇನೆ. ಆದರೆ ಹದಿನಾರೆರಡಲೆ ಆದರೂ ಮನಸ್ಥಿತಿ ಬದಲಾಗದಿರುವುದರ ಬಗ್ಗೆ ಉತ್ತರವನ್ನೂ "ಸಂತೋಷಪಡುವ ಮನಸ್ಸಿಲ್ಲದಿರುವವರು ಯಾಕೆ ನಮ್ಮ ಜೊತೆ ಸೇರಬೇಕು? ನೋಡಿ ಸ್ವಾಮಿ ನಾವಿರೋದೆ ಹೀಗೆ"ಎಂದು. ಉದ್ದಟ ತನದ್ದೇ ಕೊಡುವುದು ಅನಿವಾರ್ಯ ವಾಗಿದೆ. ಮೊನ್ನೆ ಅಣ್ಣನ ಸ್ನೇಹಿತರ ಮಗನ ಬರ್ತ್ ಡೇ ಗೆ ಹೋದಾಗಲೂ ಇಂತಹುದೇ ಪರಿಸ್ಥಿತಿ ಮಕ್ಕಳಿಗಾಗಿ ತಂದಿದ್ದ ಫ್ಯಾನ್ಸಿ ಐಟಮ್ಸ್ ಮಕ್ಕಳಿಗೆ ಕೊಟ್ಟು ಉಳಿದದ್ದು ನನ್ನಿಂದ ಮೊದಲ್ಗೊಂಡು ಸುಮಾರು ನಲವತ್ತರ ವರೆಗಿನ ಹುಚ್ಚುಕೋಡಿಗಳ ಮನಸ್ಸನ್ನ ಅಲಂಕರಿಸಿತ್ತು ಸ್ವಲ್ಪ ದೈರ್ಯ ಇದ್ದವರ ತಲ...